ವಿರಾಟಪರ್ವ ಸಂಗ್ರಹ

Author : ತ.ಸು. ಶಾಮರಾಯ

Pages 156

₹ 60.00




Year of Publication: 2005
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: # 9, 'ರಮ್ಯ', ಗೋಕುಲಂ, 3ನೆಯ ಹಂತ, ಮೈಸೂರು.
Phone: 9880749412

Synopsys

ಕನ್ನಡ ಮಹಾಭಾರತದ ವಿರಾಟಪರ್ವ ಸಂಗ್ರಹ- ಈ ಕೃತಿಯನ್ನು ಖ್ಯಾತ ಲೇಖಕ ತ.ಸು. ಶಾಮರಾಯ ಅವರು ಸಂಗ್ರಹಿಸಿದ್ದಾರೆ. ಮಹಾಭಾರತದ 18 ಪರ್ವಗಳಲ್ಲಿ ವಿರಾಟ ಪರ್ವವು 4ನೇ ಪರ್ವ. ಪಾಂಡವರಾದ ಧರ್ಮರಾಜ (ಯುಧಿಷ್ಟಿರ), ಭೀಮ, ಅರ್ಜುನ, ನಕುಲ, ಸಹದೇವ ಹಾಗೂ ಪತ್ನಿ ದ್ರೌಪದಿಯೊಂದಿಗೆ ವಿರಾಟ ರಾಜನ ಆಸ್ಥಾನಕ್ಕೆ ಬರುತ್ತಿದ್ದಂತೆ ಈ ಪರ್ವ ಆರಂಭವಾಗುವುದು. ಈ ಅಂಶಗಳನ್ನು ಒಳಗೊಂಡ ಕೃತಿ ಇದು.

About the Author

ತ.ಸು. ಶಾಮರಾಯ
(12 June 1906 - 21 August 1998)

ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...

READ MORE

Related Books