ವಿಷಯಾಂತರ

Author : ಗುರುರಾಜ್ ಸನಿಲ್

Pages 168

₹ 150.00




Year of Publication: 2016
Published by: ಗೀತಾ ಪ್ರಕಾಶನ
Address: # ಸಂತೋಷನಗರ, ಅಟ್ಟೂರು, ಯಲಹಂಕ, ಬೆಂಗಳೂರು-560044

Synopsys

ಉರಗ ತಜ್ಞ ಗುರುರಾಜ್ ಸನಿಲ್ ಅವರ ಕೃತಿ-ವಿಷಯಾಂತರ. ಪರಿಸರ ಪ್ರೇಮಿಯಾಗಿರುವ ಲೇಖಕರು, ಹಾವುಗಳ ಬಗ್ಗೆ ಮನುಷ್ಯರಿಗಿರುವ ನಂಬಿಕೆ, ಭೀತಿ ಇತ್ಯಾದಿ ಕುರಿತ ಅಂಶಗಳು ಇಲ್ಲಿಯ ಚರ್ಚೆಯ ವಸ್ತು. ನರಜೀವಿ-ಉರಗಜೀವಿಗಳ ಒಡನಾಟದ ಜೀವನಗಾಥೆ ಎಂಬುದು ಈ ಕೃತಿಯ ಉಪಶೀರ್ಷಿಕೆ. ಪರಸ್ಪರ ಜೀವ ಭೀತಿ ಇಟ್ಟುಕೊಂಡಾದರೂ ಮನುಷ್ಯ-ಹಾವುಗಳ ಮಧ್ಯೆ ನಡೆಯುತ್ತಲೇ ಬಂದ ಬದುಕಿನ ಕಥೆಯನ್ನು ಹೇಳುವುದು ಈ ಕೃತಿಯ ವಸ್ತು. ಪ್ರಕೃತಿಯಲ್ಲಿಯ ಸಕಲ ಜೀವಸಂಕುಲಗಳೊಂದಿಗೆ ಮನುಷ್ಯ ಹೇಗೆ ಸಾಮರಸ್ಯದೊಂದಿಗೆ ಬದುಕುವ ಅನಿವಾರ್ಯತೆಗಳನ್ನು, ಅದರ ಮಹತ್ವವನ್ನು ತೋರುವ ಕೃತಿ ಇದು.

About the Author

ಗುರುರಾಜ್ ಸನಿಲ್
(14 June 1968)

ಲೇಖಕ ಗುರುರಾಜ್ ಸನಿಲ್ ಅವರು ಮೂಲತಃ ಉಡುಪಿ ಜಿಲ್ಲೆಯ ತೆಂಕುಪೇಟೆಯವರು. ತಂದೆ ಶೇಷಪ್ಪ,  ತಾಯಿ ಸುಂದರಿ. ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲೂ ಪೂರೈಸಿದರು. ಹವ್ಯಾಸದೊಂದಿಗೆ ಇವರ ಉರಗ ತಜ್ಞರು. 25 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದ ದಾಖಲೆ ಇವರದ್ದು. ಹಾವಿನ ಮೊಟ್ಟೆಗಳನ್ನು ಸಂಗ್ರಹಿಸಿ, ಕಾವು ನೀಡಿ ಮರಿಗಳನ್ನು ಮಾಡಿದ ನಂತರ ಅವುಗಳನ್ನು ಕಾಡಿಗೆ ಬಿಟ್ಟ ಪ್ರಸಂಗಗಳೂ ಇವೆ. "ನಮ್ಮ ಮನೆ ನಮ್ಮ ಮರ  ಸಂಸ್ಥೆಯೊಂದಿಗೆ ಈವರೆಗೆ 10ಸಾವಿರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ.  ಕೃತಿಗಳು:  ಹಾವು ನಾವು , ಹಾವು ನಾವು, ದೇವರ ಹಾವು : ನಂಬಿಕೆ ...

READ MORE

Related Books