ವಿಶ್ವಚೇತನ ಬುದ್ಧ

Author : ವಿ. ಮುನಿವೆಂಕಟಪ್ಪ

Pages 466

₹ 400.00




Year of Publication: 2012
Published by: ಪಂಚಮ ಪ್ರಕಾಶನ
Address: # !@40, 3 ನೇ ಅಡ್ಡರಸ್ತೆ, ಗಂಗೆ ರಸ್ತೆ, ಕುವೆಂಪುನಗರ, ಮೈಸೂರು-570023

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ವಿಶ್ವಚೇತನ ಬುದ್ಧ. ದೇಶವನ್ನು ಪುರೋಹಿತಶಾಹಿಯು ಶೋಷಿಸಿದೆ. ಬಹುಜನರಿಗೆ ಸೇರಬೇಕಿದ್ದ ಈ ದೇಶ ಕೆಲವೇ ಕೆಲವು ಜಾತಿಯ ಜನರು ಆಳುತ್ತಿದ್ದಾರೆ. ದೇವರ ಹೆಸರಿನಲ್ಲಿ ಎಲ್ಲ ರೀತಿಯ ಶೋಷಣೆ ಮುಂದುವರಿದಿದೆ. ಇಂತಹ ಎಲ್ಲ ಶೋಷಣೆಗಳಿಗೆ ಕೊನೆ ಹಾಡಲು ಬುದ್ಧನು ಸಲಹೆ ಅಗತ್ಯವಿತ್ತು. ಆದರೆ ಇವು ಹರಡದಂತೆ ಸಂಚು ಮಾಡಲಾಯಿತು. ದೇಶ ಬಿಟ್ಟು ಬುದ್ಧನ ಬೋಧೆಗಳು ಜಪಾನ್., ಚೀನಾ ಸೇರಿದಂತೆ ಇತರೆ ದೇಶಗಳಿಗೆ ಹೋಯಿತು. ವಿಶ್ವಕ್ಕೆ ಅನ್ವಯವಾಗಬಹುದಾದ ಬೋಧೆಗಳಿವು. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು. ನಾಡಿನ ವಿವಿಧ ಲೇಖಕರ ಬರೆಹಗಳು ಸಂಕಲನದಲ್ಲಿದ್ದು, ಕೃತಿಯ ಮೌಲ್ಯ ಹೆಚ್ಚಿಸಿವೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books