ವಿಶ್ವಮಾನವದೃಷ್ಟಿ

Author : ವಿ.ಕೃ. ಗೋಕಾಕ (ವಿನಾಯಕ)

Pages 138

₹ 110.00




Year of Publication: 2017
Published by: ಐಬಿಎಚ್ ಪ್ರಕಾಶನ
Address: 77, 2ನೇ ಮೇನ್, ರಾಮರಾವ್ ಲೇಔಟ್, ಬಿಎಸ್‌ಕೆ 3ನೇ ಹಂತ, ಬೆಂಗಳೂರು-560085

Synopsys

ವಿಶ್ವಮಾನವ ದೃಷ್ಟಿ-ವಿ.ಕೃ. ಗೋಕಾಕರು ಬರೆದ ಪ್ರಬಂಧಗಳ ಕೃತಿ. ವಿಮರ್ಶಾತ್ಮಕ ಒಳನೋಟಗಳನ್ನು ಒಳಗೊಂಡಿದೆ. ವಿಶ್ವಮಾನವನಾಗಬೇಕಾದ ಕನ್ನಡಿಗ, ಕರ್ನಾಟಕದ ಸರ್ವಜ್ಞ, ಜನತೆಯ ಕವಿ, ವಿಶ್ವಮಾನವ ಬಸವೇಶ್ವರ, ರವೀಂದ್ರರ ಕಾವ್ಯಕಲ್ಪನೆ ಹಾಗೂ ತತ್ವದರ್ಶನ, ಶ್ರೀ ಅರವಿಂದರ ಕಾವ್ಯದೃಷ್ಟಿ, ಬಾಳೆಕುಂದ್ರಿಯ ಶ್ರೀ ಪಂತರು- ಹೀಗೆ ಆರು ಉಪನ್ಯಾಸಗಳನ್ನು ಸಂಕಲಿಸಲಾಗಿದೆ. 

ಮೈಸೂರಿನ ಸುರುಚಿ ಪ್ರಕಾಶನವು ಮೊದಲ ಬಾರಿಗೆ 1971ರಲ್ಲಿ ಈ ಕೃತಿ  ಪ್ರಕಟಿಸಿತ್ತು. ಆಗ, 145 ಪುಟಗಳಿದ್ದವು. 

 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books