ವಿಶ್ವಮಾನವ ವಿವೇಕಾನಂದ ಸಂಪುಟ-3

Author : ಸ್ವಾಮಿ ಪುರುಷೋತ್ತಮಾನಂದ

Pages 424

₹ 140.00




Year of Publication: 2014
Published by: ಶ್ರೀ ರಾಮಕೃಷ್ಣಾಶ್ರಮ
Address: ಯಾದವಗಿರಿ, ಮೈಸೂರು

Synopsys

ಸ್ವಾಮಿ ಪುರುಷೋತ್ತಮಾನಂದ ಅವರು ಸ್ವಾಮಿ ವಿವೇಕಾನಂದರ ಕುರಿತು ರಚಿಸಿದ ಮೂರು ಬೃಹತ್ ಗ್ರಂಥಗಳ ಪೈಕಿ ‘ವಿಶ್ವಮಾನವ ವಿವೇಕಾನಂದ’ ಎಂಬ ಕೃತಿಯು ಮೂರನೆಯದು. ಈ ಕೃತಿಯಲ್ಲಿ, ವಿವೇಕಾನಂದರ ವಿರಾಟ ವ್ಯಕ್ತಿತ್ವದ ದರ್ಶನ ಮಾಡಲಾಗಿದೆ. ಭಾರತೀಯ ಚಿಂತನೆಗಳು, ವೇದ-ಉಪನಿಷತ್ತುಗಳ ಸಾರ, ಪಾಶ್ಚಾತ್ಯ ಚಿಂತನೆಗಳ ಅರಿವು, ತೌಲನಿಕ ಅಧ್ಯಯನದ ಅರ್ಥಪೂರ್ಣತೆ ಇತ್ಯಾದಿ ವಿಷಯಗಳ ಕುರಿತು ವಿವೇಕಾನಂದರಿಗೆ ಇದ್ದ ಪ್ರಭುತ್ತ, ವಿದ್ವತ್ತುಗಳ ಆಳ ಈ ಕುರಿತು ವಿವರಿಸಲಾಗಿದೆ. ವಿವೇಕಾನಂದರ ಚಿಂತನೆಗಳು ಕೇವಲ ಭಾರತಕ್ಕೆ ಮಾತ್ರವಲ್ಲ; ಇಡೀ ವಿಶ್ವಕ್ಕೆ ಅನ್ವಯವಾಗುವಂತಿವೆ ಎಂದು ಲೇಖಕರು ಅಭಿಪ್ರಾಯಪಟ್ಟು, ವಿಚಾರ ಮಂಡನೆಯ ಬರಹಗಳು ಇಲ್ಲಿವೆ.

About the Author

ಸ್ವಾಮಿ ಪುರುಷೋತ್ತಮಾನಂದ
(14 June 1931 - 25 February 2005)

ಖ್ಯಾತ ಚಿಂತಕ ಸ್ವಾಮಿ ಪುರುಷೋತ್ತಮಾನಂದರುದ.ಕ. ಜಿಲ್ಲೆಯ ಸಾಲಿಗ್ರಾಮ ಬಳಿಯ ಮೂಡಹಾಡು ಗ್ರಾಮದವರು. ಮೂಲ ಹೆಸರು ರಾಮಚಂದ್ರ ಬಾಯಿರಿ. ಮಲ್ಪೆಯಲ್ಲಿ ಮೆಟ್ರಿಕುಲೇಷನ್ ಮುಗಿಸಿದರು. ನಂತರ ಬೆಂಗಳೂರಿನ ರಾಮಕೃಷ್ಣಾಶ್ರಮ ಪ್ರವೇಶಿಸಿದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು. ನಂತರ ಪ್ರವಚನಕಾರರಾಗಿ ಮುಂದುವರಿದರು.  “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”.ಎನ್ನುವುದು ಅವರ ಪ್ರವಚನದ ಜೀವಾಳವಾಗಿತ್ತು. ಕೊಡಗು, ಬೆಳಗಾವಿ ಹೀಗೆ ರಾಜ್ಯದ ವಿವಿಧೆಡೆ ಶ್ರೀರಾಮಕೃಷ್ಣಾಶ್ರಮದ ಶಾಖೆಗಳನ್ನು ಆರಂಭಿಸಿದರು. ಅವರು ಉತ್ತಮ ಹಾಡುಗಾರರೂ ಆಗಿದ್ದು, ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ.  ಕೃತಿಗಳು : ವೀರ ಸಂನ್ಯಾಸಿ ವಿವೇಕಾನಂದ, ವಿಶ್ವವಿಜೇತ ವಿವೇಕಾನಂದ, ವಿಶ್ವಮಾನವ ...

READ MORE

Related Books