ವಿಸ್ಮಯ ಭಾಗ ೧

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 104

₹ 87.00




Year of Publication: 2013
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ತೇಜಸ್ವಿಯವರ ವಿಸ್ಮಯ ಭಾಗ 1 (1993) ಭಾಗದಲ್ಲಿ 'ಬ್ರಹ್ಮಾಂಡದ ಹಿನ್ನೆಲೆಯಲ್ಲಿ ಪರಿಸರ', 'ಜೀವಸ್ಟರದ ಅನಂತ ವೈವಿಧ್ಯಗಳು', 'ಸೌರಶಕ್ತಿಯ ವಿಶ್ವರೂಪ' ಎಂಬ ಮೂರು ಉಪ ವಿಭಾಗಗಳಿವೆ. ಬ್ರಹ್ಮಾಂಡದ ಹುಟ್ಟು ಮತ್ತು ಸಾವು, ಭೂಮಿ ವಯಸ್ಸು, ಸಸ್ಯ ಮತ್ತು ಪ್ರಾಣಿಗಳ ಉದ್ಭವ, ಮರುಭೂಮಿಗಳು, ಬೆಂಕಿ ಮತ್ತು ಚಳಿಯ ನಡುವೆ, ತಂಡಾ ಪ್ರದೇಶಗಳು, ಮಹಾನದಿ ಅಮೇಜಾನ್, ಕೋನಿಫರಸ್ ಕಾಡುಗಳು, ಬಿಸಿಲು, ಪರಿಸರ ಪ್ರತಿರೋಧ, ಪರಿಸರವು ನಿರಂತರ ಹೊಂದಾಣಿಕೆಯೇ? ಎಂದೆಲ್ಲಾ ಚರ್ಚಿಸಿ ವಿಶ್ಲೇಷಿಸುವುದರ ಮೂಲಕ ಪರಿಸರ ವಿಜ್ಞಾನದ ಮೂಲ ತತ್ತ್ವಗಳನ್ನು ಹಂತ ಹಂತವಾಗಿ ಅರಿವಿಗೆ ತರುತ್ತದೆ ಕೃತಿ. ತೇಜಸ್ವಿಯವರು ಪ್ರದೀಪ ಕೆಂಜಿಗೆಯವರೊಂದಿಗೆ ಸೇರಿ ರಚಿಸಿದ್ದಾರೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books