ವ್ಯಾಸಪರ್ವ

Author : ಗೌರೀಶ ಕಾಯ್ಕಿಣಿ

Pages 188

₹ 40.00




Year of Publication: 1992
Published by: ಪ್ರಮತಿ ಪ್ರಕಾಶನ
Address: ಸುಬ್ರಹ್ಮಣ್ಯ, ದಕ್ಷಿಣ ಕನ್ನಡ ಜಿಲ್ಲೆ- 574238

Synopsys

‘ವ್ಯಾಸಪರ್ವ’ ಮಹಾಭಾರತದ ಹತ್ತು ಪ್ರಮುಖ ಪಾತ್ರಗಳ ಮೇಲೆ ಹೊಸಬೆಳಕು ಚೆಲ್ಲುವ ಕೃತಿ. ಮರಾಠಿಯಲ್ಲಿ ಶ್ರೀಮತಿ ದುರ್ಗಾ ಭಾಗವತ ಅವರ ಕೃತಿಯನ್ನು ಗೌರೀಶ ಕಾಯ್ಕಿಣಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವ್ಯಾಸಪರ್ವ ಪ್ರಮತಿ ಮತ್ತು ಮರಾಠೀ ಕನ್ನಡ ಸ್ನೇಹವರ್ಧನ ಕೇಂದ್ರ-ಪುಣೆ-ಇವೆರಡರ ಗೆಳೆತನದ ಒಪ್ಪಿಗೆಯ ಅಪ್ಪುಗೆಯಾಗಿ ಹೊರಬರುತ್ತಿದೆ. ಈ ಕೇಂದ್ರದ ವಕ್ತಾರರು ಡಾ. ಶ್ರೀನಿವಾಸ ಹಾವನೂರರು. ಈ ಮಹನೀಯರು; ಮರಾಠಿ ಕನ್ನಡ ಎಂದೇನು, ತಮ್ಮ ಸನಿಹ ಸುಳಿಯುವ ಎಲ್ಲರಲ್ಲೂ ಗೆಳೆತನದ ಬೆಳೆ ತೆಗೆಯಬಲ್ಲ ಮೈತ್ರೀಪುರುಷರು. ಹಾವನೂರರ ಸಲಹೆ;ಸೂಚನೆ; ಎಲ್ಲ ಹಂತಗಳಲ್ಲೂ ಅನನ್ಯ ಸಹಕಾರಕ್ಕೆ ಕೃತಜ್ಞನೆಯನ್ನು ಅರ್ಪಿಸಿದ್ದಾರೆ ಪ್ರಮತಿ ಪ್ರಕಾಶನದ ಸುಬ್ರಹ್ಮಣ್ಯ. ಕೃತಿಯಲ್ಲಿ ವ್ಯಾಸಪರ್ವ: ಪ್ರಸ್ತಾವನೆ, ಪೂರ್ಣಪುರುಷ ಕೃಷ್ಣ, ಸಿಡಿದ ಒಗ್ಗರಣೆಯ ಸಾಸಿವೆ, ಕನಲಿದ ಕ್ಷಿತಿಜ, ವ್ಯಕ್ತಿರೇಖೆ ಕಳೆದುಕೊಂಡ ಮನುಷ್ಯ, ಏಕಾಕಿ, ಅಪ್ಸರಲೋಕದಿಂದ ವಾಸ್ತವದೆಡೆಗೆ, ಮುಕ್ತಪಥಿಕ, ಕಂಬನಿ ಆರಿದ ಮೇಲೆ, ಮಾನವರಲ್ಲಿ ಕರಗಿಹೋಗ ಮಾನವ, ಕಾಮಿನಿ, ಪರಿಶಿಷ್ಟ ಎಂಬ ಶೀರ್ಷಿಕೆಯಡಿಯಲ್ಲಿ ವಿವರಗಳು ಸಂಕಲನಗೊಂಡಿವೆ

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books