ಯಾರು?

Author : ಬಿ.ಆರ್‌. ಚಂದ್ರಶೇಖರ ಬೇದೂರು

Pages 128

₹ 140.00




Year of Publication: 2021
Published by: ಕೃತಿ ಪ್ರಕಾಶನ
Address: ನಂ. 10, ʻಶ್ರೀಮಾತಾʼ , ಆದಿತ್ಯ ನಗರ, 5ನೇ ಮುಖ್ಯರಸ್ತೆ, 3ನೇ ಕ್ರಾಸ್‌, ಅಂಜನಾಪುರ ಪೋಸ್ಟ್‌, ಜೆ.ಪಿ. ನಗರ 8ನೇ ಹಂತ, ಬೆಂಗಳೂರು- 560108
Phone: 7259283918

Synopsys

ಲೇಖಕ ಬಿ ಆರ್ ಚಂದ್ರಶೇಖರ್ ಬೇದೂರು ಅವರು ವ್ಯಕ್ತಿಗಳ ಚಿತ್ರಣ ನೀಡಿರುವ ಕೃತಿ- ʻಯಾರು?ʼ ದೇಶ ಕಟ್ಟಿದವರು ಹಾಗೂ ಒಡೆದವರು, ಮತ್ತು ಕೆಲವು ಮನೋವಿಕಾರಿಗಳು ಸೇರಿದಂತೆ ವಿವಿಧ ದೇಶಗಳ 29 ಪ್ರಸಿದ್ಧ ವ್ಯಕ್ತಿಗಳ ಪರಿಚಯ ಮಾಡಿಕೊಡಲಾಗಿದೆ. ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್‌. ಎಂ ಕೃಷ್ಣ ಅವರಂತಹ ಖ್ಯಾತ ರಾಜಕಾರಣಿಗಳು, ವೀರಪ್ಪನ್‌ , ಎಲ್‌.ಟಿ.ಟಿ ನಾಯಕ ಪ್ರಭಾಕರನ್‌, ಕೊತ್ವಾಲ್‌ ರಾಮಚಂದ್ರ ಹಾಗೂ ದಾವೂದ್‌ ಇಬ್ರಾಹಿಂ ಅವರಂತಹ ಕುಖ್ಯಾತರು  ಸೇರಿದಂತೆ ಹಲವಾರು ವ್ಯಕ್ತಿಗಳ ಪರಿಚಯದ ಜೊತೆಗೆ ಸಂಬಂಧಿಸಿದ ಘಟನೆಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. 

About the Author

ಬಿ.ಆರ್‌. ಚಂದ್ರಶೇಖರ ಬೇದೂರು

ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್  ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು.  ...

READ MORE

Related Books