ಯದ್ವಾ-ತದ್ವಾ

Author : ನಾ. ಕಸ್ತೂರಿ

Pages 104

₹ 0.00




Year of Publication: 1939
Published by: ಸರಸ್ವತಿ ಪುಸ್ತಕ ಭಂಡಾರ
Address: ಮಂಡ್ಯ

Synopsys

ಖ್ಯಾತ ಸಾಹಿತಿ ನಾ. ಕಸ್ತೂರಿ ಅವರು ಹಾಸ್ಯ ಬರೆಹಗಳ ಲೇಖನಗಳ ಸಂಗ್ರಹ-ಯದ್ವಾ-ತದ್ವಾ. ಕೃತಿಯಲ್ಲಿ ಕಾವಲಿಯಿಂದ ಒಲೆಗೆ, ಯಾರನ್ನೂ ಕೇಳಿದರೂ ಹೇಳ್ತಾರೆ, ಸಾಹಿತ್ಯೋಪಾಸಕರಿಗೆ ಕೆಲವು ಸಲಹೆಗಳು, ಪರೀಕ್ಷೆ-ಸಿನಿಮಾ, ಇದು ನ್ಯಾಯವೋ?, ಭಾವಚಿತ್ರದ ಅನಾವರಣ, ವಂದನಾರ್ಪಣೆ, ಗುಂಡನ ಗಾದೆಗಳು, ಢುಂಕಿ, ಎಂಥ ಹೆಸರಿವು?, ಕನ್ನಡ ಕವಿಗಳ ಪರಿಚಯ, ಹೀಂಗೂ ಮಾತನಾಡುತ್ತಾರೆ...ಹೀಗೆ ಒಟ್ಟು 26 ಹಾಸ್ಯ ಪ್ರಬಂಧಗಳನ್ನು ಬರೆದಿದ್ದಾರೆ. ಇವುಗಳಲ್ಲಿ ವ್ಯಂಗ್ಯದ ಮೊನಚು, ವಿಡಂಬನೆ ಇದೆ. ಸಮಾಜವನ್ನು ಶುದ್ಧೀಕರಿಸುವ ಉದ್ದೇಶವಿದೆ.

About the Author

ನಾ. ಕಸ್ತೂರಿ
(25 December 1897 - 14 August 1987)

ಕೇರಳದ ತ್ರಿಪುನಿತ್ತೂರ್ ಗ್ರಾಮದಲ್ಲಿ ಜನಿಸಿದ ನಾ. ಕಸ್ತೂರಿ ಅವರು ಕೇರಳದ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ತಂದೆ ನಾರಾಯಣ. ಇತಿಹಾಸದಲ್ಲಿ ಸ್ನಾತಕೋತ್ತರ (ಎಂ.ಎ.) ಪಡೆದ ನಂತರ ಬಿ.ಎಲ್. ಪದವಿ ಪಡೆದರು. ವಕೀಲಿ ವೃತ್ತಿಗೆ ಸೇರುವ ಬದಲು ಶಿಕ್ಷಕ ವೃತ್ತಿಯತ್ತ ಹೊರಳಿದರು. ಮೈಸೂರಿಗೆ ಬಂದ ಅವರು ಅಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನಾಟಕ, ಪ್ರಹಸನ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು ಅವರ ನಾಟಕಗಳು. ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ ಮುಂತಾದ ಹಾಸ್ಯ ಸಂಕಲನಗಳನ್ನು ರಚಿಸಿರುವುದಲ್ಲಿ ಹಾಸ್ಯ ...

READ MORE

Related Books