ಯಾರ ಜಪ್ತಿಗೂ ಸಿಗದ ನವಿಲುಗಳು

Author : ಪಿ. ಚಂದ್ರಿಕಾ

Pages 476

₹ 350.00




Year of Publication: 2013
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಲೇಖಕಿ ಪಿ. ಚಂದ್ರಿಕಾ ಅವರು ಸಾಹಿತಿ ದೇವನೂರು ಮಹದೇವರ ಸಾಹಿತ್ಯ ಅಧ್ಯಯನ ಮಾಡಲು, ಮತ್ತು ಅವರ ಬಗೆಗೆ ಬಂದ ಲೇಖನ ಬರಹಗಳನ್ನು ಸಂಪಾದಿಸಿ ಪ್ರಕಟಿಸಿ ಹೊರತಂದಿರುವ ಕೃತಿ ’ಯಾರ ಜಪ್ತಿಗೂ ಸಿಗದ ನವಿಲುಗಳು’.

ಈ ಕೃತಿಯಲ್ಲಿ ದೇವನೂರು ಮಹಾದೇವ ಅವರ ಸಾಹಿತ್ಯ ಕೃತಿಗಳ ಕುರಿತು ಬೇರೆ ಬೇರೆ ಬರಹಗಾರರು ಹಂಚಿಕೊಂಡ ಬರಹಗಳಿವೆ. 

ನಮ್ಮ ನಡುವಿನ ಅನೇಕ ಸ್ಥಿತ್ಯಂತರ, ತಲ್ಲಣ, ಅಸಹಾಯಕತೆ, ನೋವು ಮತ್ತು ಅದರೊಟ್ಟಿಗೇ ಇರುವ ಬದುಕಿನ ಜೀವಂತ ಸೆಲೆಗಳನ್ನು ಕಟ್ಟಿಕೊಡಲು ಸಾಧ್ಯವಾಗುವ ದೇವನೂರ ಮಹಾದೇವರ ಸಾಹಿತ್ಯ ಸೃಷ್ಟಿಯನ್ನು ಅನೇಕರ ಬರಹಗಳಲ್ಲಿ, ವಿಚಾರಧಾರೆಗಳಲ್ಲಿ, ಅನಿಸಿಕೆ ,ಅಭಿಪ್ರಾಯಗಳಲ್ಲಿ ಲೇಖಕಿ ಪ್ರಕಟಿಸಿ ಓದುಗರಿಗೆ ನೀಡಿದ್ದಾರೆ. 

About the Author

ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...

READ MORE

Related Books