ಯಶವಂತನ ಯಶೋಗೀತೆ

Author : ಸುಧಾ ಆಡುಕಳ

Pages 56

₹ 30.00




Year of Publication: 2016
Published by: ಬಂಡಾಯ ಪ್ರಕಾಶನ
Address: ಆರ್. ವಿ. ಪುಸ್ತಕ ಮನೆ, ತಿಮ್ಮಪ್ಪ ನಾಯಕ ವೃತ್ತ, ಸಿದ್ಧಾಪುರ -581334
Phone: 9448729359

Synopsys

ಯಶವಂತನ ಯಶೋಗೀತ ಆರ್. ವಿ. ಭಂಡಾರಿ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ. 2002ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಈ ಪುಸ್ತಕಕ್ಕೆ ದೊರೆತಿದೆ. ನಾಟಕಕಾರ್ತಿ ಸುಧಾ ಆಡುಕಳ ಅವರು ಈ ಕೃತಿಯನ್ನು ನಾಟಕವಾಗಿ ರೂಪಾಂತರಿಸಿದ್ದಾರೆ. ಸಹಯಾನ ಮಕ್ಕಳ ಶಿಬಿರದಲ್ಲಿ ಈ ನಾಟಕವು ಪ್ರದರ್ಶಿಸಲ್ಪಟ್ಟಿದೆ. ಗ್ರಾಮೀಣ ಒಗಟುಗಳನ್ನು ಮತ್ತು ಮಕ್ಕಳ ಲವಲವಿಕೆಯನ್ನು ಕಟ್ಟಿಕೊಡುತ್ತಲೇ ಯಶವಂತನೆಂಬ ಹುಡುಗನ ಯಶಸ್ಸಿನ ದಾರಿಯನ್ನು ಈ ನಾಟಕ ಹೆಣೆಯುತ್ತದೆ. ಹರಿದಷ್ಟೂ ಮತ್ತೆ ಬಲೆ ಕಟ್ಟುವ ಜೇಡನ ಹಠವು ಉಪಮೆಯಾಗಿ ನಿಲ್ಲುತ್ತದೆ.

 

About the Author

ಸುಧಾ ಆಡುಕಳ
(14 January 1974)

ಸುಧಾ ಆಡುಕಳ ಅವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ ಗ್ರಾಮದವರಾದ ಶ್ರೀಮತಿ ಸುಧಾ ಆಡುಕಳ ಅವರು ಪ್ರಸ್ತುತ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾವಿನಿ, ಮಾಧವಿ ಮೊದಲಾದ ಏಕವ್ಯಕ್ತಿ ನಾಟಕಗಳನ್ನು, ಮಕ್ಕಳ ರವೀಂದ್ರ, ಕನಕ-ಕೃಷ್ಣ, ಮಕ್ಕಳ ರಾಮಾಯಣ, ಬ್ರಹ್ಮರಾಕ್ಷಸ ಮತ್ತು ಕಥೆ, ಮರ ಮತ್ತು ಮನುಷ್ಯ ಮೊದಲಾದ ಮಕ್ಕಳ ನಾಟಕಗಳನ್ನು ರಚಿಸಿರುತ್ತಾರೆ. ರವೀಂದ್ರನಾಥ ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ಮತ್ತು ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ‘ಬಕುಲದ ಬಾಗಿಲಿನಿಂದ’ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ...

READ MORE

Related Books