ಯೋಗಾಮೃತಶತಕಂ

Author : ಎರ್ತೂರು ಶಾಂತಿರಾಜಶಾಸ್ತ್ರಿ

Pages 46

₹ 95.00




Year of Publication: 1999
Published by: ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್
Address: ಜಯನಗರ, ಬೆಂಗಳೂರು- 560070

Synopsys

‘ಯೋಗಾಮೃತಶತಕಂ’ ಕೃತಿಯನ್ನು ಎರ್ತೂರು ಶಾಂತಿರಾಜಶಾಸ್ತ್ರಿಗಳು ಹಾಗೂ ಹೆಚ್.ಆರ್. ರಂಗಸ್ವಾಮಯ್ಯಂಗಾರ್ ಅವರು ಸಂಪಾದಿಸಿದ್ದಾರೆ. ಒಂದುನೂರು ಆಣಿಮುತ್ತುಗಳಿರುವ ಯೋಗಾಮೃತಶತಕಂ ಪುಸ್ತಕದಲ್ಲಿ ಸಂಪಾದಕರು ಶ್ರಮವಹಿಸಿ ಎಲ್ಲರಿಗೂ ಅರ್ಥವಾಗುವಂತೆ ಪದ್ಯಗಳಿಗೆ ತಾತ್ಪರ್ಯವನ್ನು ಬರೆದಿದ್ದಾರೆ. ಚಿತ್ತವೆಂಬ ರತ್ನವನ್ನು ಯಾವ ವ್ಯಾಸಂಗದಲ್ಲಿಯೂ ಹರಿಯಿಸದೆ ಜಿನವಚನಾಭ್ಯಾಸದಲ್ಲಿಯೂ, ಆತ್ಮತತ್ತ್ವಾಭ್ಯಾಸದಲ್ಲಿಯೂ ಇರಿಸಲು ತಿಳಿದವನೇ ಧನ್ಯನು ಎಂಬುದನ್ನು ಪ್ರತಿಯೊಬ್ಬರೂ ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು. ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿರಬೇಕು. ಸಮುದ್ರದಲ್ಲಿ ಅಲೆಗಳು ಏಳುವಂತೆಯೇ ಮನಸ್ಸಿನಲ್ಲಿಯೂ ಸಂಸಾರಬಂಧಕ್ಕೆ ಕಾರಣವಾಗುವ ಭಾವನೆಗಳು ಮೇಲೇಳುತ್ತಲೇ ಇರುತ್ತವೆ. ಬಂಧಕ್ಕೆ ಕಾರಣವಾಗುವ ಭಾವನೆಗಳಿಂದ ದೂರವಾಗಿ ಶುದ್ಧಾತ್ಮನ ಚಿಂತನೆಯಲ್ಲಿಯೇ ಇದ್ದು ಮೋಕ್ಷಪ್ರಾಪ್ತಿಗೆ ಪ್ರಯತ್ನಿಸುವುದೇ ಜೀವನದ ಗುರಿ ಎಂಬುದನ್ನು ಮರೆಯಬಾರದು. ಅಜ್ಞಾತ ಕವಿಯಿಂದ ರಚಿತವಾದ ಯೋಗಾಮೃತಶತಕದ ಒಂದೊಂದು ಪದ್ಯಗಳೂ ಗಹನವಾದ ತತ್ತ್ವಗಳನ್ನು ಸುಲಭ ಶೈಲಿಯಲ್ಲಿ ತಿಳಿಸುವಂತಿವೆ, ಓದುಗರನ್ನು ತತ್ತ್ವಚಿಂತನೆಗೆ ಪ್ರೇರೇಪಿಸುತ್ತವೆ.

About the Author

ಎರ್ತೂರು ಶಾಂತಿರಾಜಶಾಸ್ತ್ರಿ

ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಜೈನಕಾಶಿ ಮೂಡುಬಿದರೆ ಬಳಿಯ ಎರ್ತೂರು ಎಂಬ ಸಣ್ಣ ಹಳ್ಳಿಯವರು. ಸಾಧಾರಣ ರೈತ ಕುಟುಂಬದಲ್ಲಿ 1888ರಲ್ಲಿ ಜನಿಸಿದರು. ತಂದೆ- ಧರಣಪ್ಪಾರ್ಯ ಮತ್ತು ತಾಯಿ- ಚೆಲುವಮ್ಮ. ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಸುತ್ತಮುತ್ತಲಿನ ಪ್ರೀತಿಯ ತೊಟ್ಟಿಲಲ್ಲಿ ಬೆಳೆದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಎರ್ತೂರು ಮತ್ತು ಕಾರ್ಕಳದಲ್ಲಿ ನಡೆದವು. ಪೂರ್ವಾಶ್ರಮದಲ್ಲಿ ಅವರ ಅಜ್ಜ (ತಾಯಿಯ ತಂದೆ) ನವರಾಗಿದ್ದ ಆದಿಸಾಗರ(ಆದಿರಾಜಯ್ಯ) ಮುನಿಗಳು, ಕಾರ್ಕಳದ ಅಂದಿನ ಶ್ರೀಗಳು ಮತ್ತು ಶ್ರವಣಬೆಳಗೊಳದ ಸ್ವಸ್ತಿಶ್ರೀ ನೇಮಿಸಾಗರ ವರ್ಣಿಯವರ ಮಹದಾಶೀರ್ವಾದ ಮತ್ತು ಮಾರ್ಗದರ್ಶನದ ಫಲವಾಗಿ ವಿದ್ಯಾಭ್ಯಾಸವು ...

READ MORE

Related Books