ಯೋಗಶಾಸ್ತ್ರ

Author : ಜಿ.ಎಸ್. ಆಮೂರ

Pages 144

₹ 117.00




Year of Publication: 2017
Published by: ಮನೋಹರ ಗ್ರಂಥ ಮಾಲಾ
Address: ಶಿವಾಜಿ ಬೀದಿ, ಸುಭಾಶ ರಸ್ತೆ, ಧಾರವಾಡ

Synopsys

ವಿಮರ್ಶಕ -ಲೇಖಕ ಪ್ರೊ. ಜಿ.ಎಸ್. ಆಮೂರ ಅವರ ಕೃತಿ-ಶ್ರೀಮದ್ಭಗವದ್ಗೀತೆ ಶ್ರೀಕೃಷ್ಣನ ಯೋಗಶಾಸ್ತ್ರ. ಭಗವದ್ಗೀತೆಯು ಜಗತ್ತಿನ ಮಹಾಕಾವ್ಯಗಳಲ್ಲಿ ಕಾವ್ಯದ ಸ್ವರೂಪ, ಸಾರ, ಅರ್ಥವಂತಿಕೆ, ಸಂದೇಶ ಹೀಗೆ ವಿವಿಧ ಅಂಶಗಳಿಂದ ಶ್ರೇಷ್ಠವಾದದ್ದು. ಭಗವದ್ಗೀತೆಯ ಸೂತ್ರಧಾರಿ ಶ್ರೀಕೃಷ್ಣ. ಯುದ್ಧಭೂಮಿಯಲ್ಲಿ ಅರ್ಜುನನಿಗೆ ಬದುಕಿನ ಮೌಲ್ಯಗಳು ಹಾಗೂ ಅವುಗಳ ಸಮಯಾನುಸಾರದ ಅನ್ವಯತೆ, ಆದರ್ಶ ಹಾಗೂ ವಾಸ್ತವತೆಗಳ ನಡುವಿನ ವ್ಯತ್ಯಾಸ ಹೀಗೆ ಜೀವನ ಸಂದೇಶಗಳನ್ನು ಬೋಧಿಸಿದ್ದು, ಸರ್ವಕಾಲಕ್ಕೂ ಸರ್ವ ಗಡಿಗಳ ಮಿತಿಗೆ ಒಳಪಡದಂತೆ ಅನ್ವಯವಾಗುತ್ತವೆ. ಗೀತೆಯ ಪ್ರಮುಖ ಭಾಗವಾಗಿ ಯೋಗಶಾಸ್ತ್ರವಿದೆ. ಯೋಗದ ಮಹತ್ವವನ್ನೂ ಲೇಖಕರು ಕಾಣಿಸಿದ್ದು, ಯೋಗವು ಧಾರ್ಮಿಕ ದೃಷ್ಟಿಯಿಂದ ನೋಡಬಾರದು ಎಂಬ ಸೂಕ್ಷ್ಮ ಸಂದೇಶವನ್ನು ಲೇಖಕರು ಸ್ಪಷ್ಟವಾಗಿಸಿದ್ದಾರೆ.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books