ಯುಗಾಂತ

Author : ಬಾಲಚಂದ್ರ ಜಯಶೆಟ್ಟಿ

Pages 96

₹ 30.00




Year of Publication: 2003
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ
Phone: 08472226303

Synopsys

ಮಹಾಭಾರತದ ದುರಂತ ಪಾತ್ರ ಕರ್ಣನನ್ನು ಕೇಂದ್ರವಾಗಿಟ್ಟುಕೊಂಡು ಲೇಖಕ ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರು ಬರೆದ ನಾಟಕ ‘ಯುಗಾಂತ’. ಈ ನಾಟಕದ ವೈಶಿಷ್ಠ್ಯವೆಂದರೆ ಕರ್ಣ ಎಲ್ಲಿಯೂ ರಂಗದ ಮೇಲೆ ಬರುವುದಿಲ್ಲ. ಕರ್ಣನ ಹುಟ್ಟಿನ ಬಗ್ಗೆ ತಿಳಿದಿರುವವರು ಯಾರೂ ಬಾಯಿ ಬಿಡುವುದಿಲ್ಲ. ಕೊನೆಗೆ ನಿಯಮಬಾಹಿರವಾಗಿ ಆತನ ಕೊಲೆ ಯಾಗುತ್ತದೆ. “ಸತ್ಯ ನ್ಯಾಯಕ್ಕೆ ಬೆಲೆಯಿಲ್ಲದ ಈ ದ್ವಾಪರಯುಗ ಇಲ್ಲಿಗೆ ಅಂತ್ಯಗೊಳ್ಳಲಿ” ಎಂದು ಕರ್ಣನ ಪತ್ನಿ ವೃಷಾಲಿ ಶಾಪ ಕೊಡುವ ಸನ್ನಿವೇಶವನ್ನು ನಾಟಕಕಾರರು ವಸ್ತುಸ್ಥಿತಿಯಂತೆ ಚಿತ್ರಿಸಿದ್ದಾರೆ.

About the Author

ಬಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books