ಯುಗಾವತಾರ

Author : ಹೂ.ವೆ. ಶೇಷಾದ್ರಿ

Pages 311

₹ 135.00




Year of Publication: 2015
Published by: ಸಾಹಿತ್ಯ ಸಿಂಧು, ರಾಷ್ತ್ರೋತ್ಡಾನ ಸಾಹಿತ್ಯ
Address: # 5, ನೃಪತುಂಗ ರಸ್ತೆ, ಅಂಬೇಡ್ಕರ್ ವೀದಿ, ಸಂಪಂಗಿ ರಾಮನಗರ, ಬೆಂಗಳೂರು-560009

Synopsys

ಖ್ಯಾತ ಲೇಖಕ ಹೂ.ವೆ. ಶೇಷಾದ್ರಿ ಅವರ ಕೃತಿ-ಯುಗಾವತಾರ. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಆಧರಿತ ಐತಿಹಾಸಿಕ ಕೃತಿ ಇದು. ಅಸಾಧಾರಣ ಯುದ್ಧಕೌಶಲ, ಪ್ರತಿಭೆ-ಪೌರುಷಗಳಿಂದ ಇತಿಹಾಸದಲ್ಲಿ ಶಾಸ್ವತ ಸ್ಥಾನ ಪಡೆದ ಶಿವಾಜಿ, ಮಾತೃಭೂಮಿ ಅಥವಾ ದೇಶಾಭಿಮಾನದ ದ್ಯೋತಕವಾಗಿದ್ದಾರೆ. ದೇಶದಲ್ಲಿ ಎಲ್ಲೆಡೆ ಪಾರತಂತ್ರ್ಯದ ಬಿರುಗಾಳಿ ಭೀಕರವಾಗಿ ಬೀಸುತ್ತಿದ್ದ ಮೃತ್ಯುಸಂಕಟ ಸಮಯದಲ್ಲೂ ವಿವೇಕ, ತಾಳ್ಮೆಯಿಂದ ಎದುರಿಸಿದ ಶಿವಾಜಿ ಛತ್ರಪತಿಯ ಸುತ್ತ ಹೆಣೆದ ಇತಿಹಾಸದ ಘಟನಾವಳಿಗಳು ಇಲ್ಲಿ ಕಥನ ಶೈಲಿಯಲ್ಲಿ ಮೇಳವಿಸಿವೆ.

About the Author

ಹೂ.ವೆ. ಶೇಷಾದ್ರಿ
(26 May 1926 - 14 August 2005)

ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು.  ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...

READ MORE

Conversation

Related Books