ಯುಗಪುರುಷ ಶಂಕರ

Author : ಎನ್. ರಂಗನಾಥಶರ್ಮಾ

Pages 72

₹ 10.00




Year of Publication: 2002
Published by: ವೇದಾಂತ ಭಾರತೀ
Address: ವೇದ-ವೇದಾಂತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ, ಚಂದ್ರಮೌಳಿರಸ್ತೆ, ಕೃಷ್ಣರಾಜನಗರ, ಮೈಸೂರು- 571602

Synopsys

ಶ್ರೀ ಶಂಕರಭಗವತ್ಪಾದರ ತತ್ತ್ವೋಪದೇಶವನ್ನು ಸಾಮಾನ್ಯ ಜನರಿಗೂ ತಲುಪಿಸುವಂತೆ ಮಾಡುವುದಕ್ಕಾಗಿ ವೇದಾಂತ ಭಾರತಿಯು ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಶಂಕರ ಸಂದೇಶಸಪ್ತಾಹವೂ ಒಂದು.

ನಿರ್ದಿಷ್ಟವೇಳೆಯಲ್ಲಿ ಬೆಂಗಳೂರಿನ ನೂರಾರು ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯುವ ಈ ಕಾರ್ಯಕ್ರಮದ ಸಂದರ್ಭದಲ್ಲಿ ಆಚಾರ್ಯರ ಜೀವನಚರಿತ್ರೆ ಹಾಗೂ ಉಪದೇಶಗಳ ಬಗ್ಗೆ ಒಂದು ಪುಟ್ಟ ಪುಸ್ತಿಕೆ ಹೊರ ತರಬೇಕೆಂಬುದು ವೇದಾಂತಭಾರತಿ ಅಧ್ಯಯನ ಸಂಸ್ಥೆಯ ಉದ್ದೇಶವಾಗಿತ್ತು. ಅದಕ್ಕೆ ಸ್ಪಂದಿಸಿದ್ದು ನಾಡಿನ ಶ್ರೇಷ್ಠ ವಿದ್ವಾಂಸರಾದ ಎನ್. ರಂಗನಾಥಶರ್ಮಾರವರು. ಸಂಸ್ಥೆಯ ಉದ್ದೇಶಕ್ಕೆ ಜೊತೆ ನಿಂತು ಶಂಕರಾಚಾರ್ಯರ ಕುರಿತಾದ ಈ ಮಹತ್ವದ ಕೃತಿಯನ್ನು ರಚಿಸಿದ್ದಾರೆ.

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books