ಯುವಜನರ ಸಮಸ್ಯಾತ್ಮಕ ಮಾತು-ವರ್ತನೆಗಳಿಗೆ ಪರಿಹಾರವೇನು?

Author : ಸಿ.ಆರ್. ಚಂದ್ರಶೇಖರ್

Pages 104

₹ 68.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 08026617100

Synopsys

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಯುವಜನರ ಸಮಸ್ಯಾತ್ಮಕ ಮಾತು-ವರ್ತನೆಗಳಿಗೆ ಪರಿಹಾರವೇನು?. ವಯೋಸಹಜವಾಗಿ ಯುವಕರು ತಮ್ಮದೇ ವೈಚಾರಿಕ ಹಾಗೂ ಭಾವನಾತ್ಮಕ ಜಗತ್ತನ್ನು ಹೊಂದಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದ ಪಾಲಕರು ಅಪಾರ್ಥ ಕಲ್ಪಿಸಿ ತಮ್ಮ ಮಕ್ಕಳ ಬಗ್ಗೆ ಸಲ್ಲದ ಆಲೋಚನೆ ಮಾಡಿಕೊಳ್ಳುತ್ತಾರೆ. ಇದರಿಂದ ಸಮಸ್ಯೆಗಳ ಉದ್ಭವ ವಾಗುತ್ತವೆ. ಯುವಜನರ ಮಾತು-ವರ್ತನೆಗಳು ಪಾಲಕರಿಗೆ ವಿಚಿತ್ರ ಎಂಬಂತೆ ತೋರುತ್ತವೆ. ಮಕ್ಕಳೊಂದಿಗೆ ಸೌಹಾರ್ದಯುತ ಸಂಬಂಧ ಇರದಿದ್ದರೆ ಇಂತಹ ಸಮಸ್ಯೆಗಳು ಇನ್ನೂ ಹೆಚ್ಚುತ್ತವೆ. ಈ ಹಿನ್ನೆಲೆಯಲ್ಲಿ, ಮನೋವೈದ್ಯರಾದ ಲೇಖಕರು ಪಾಲಕರಿಗೆ ಹಾಗೂ ಯುವ ಜನರಿಗೂ ಕೆಲ ಸಲಹೆಗಳನ್ನು ನೀಡಿರುವ ಅಂಶಗಳು ಈ ಕೃತಿಯಲ್ಲಿವೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books