Date: 23-08-2019
Location: ಬೆಂಗಳೂರು
ಆಗಸ್ಟ್ 22ರಂದು, ಡಾ. ಯು.ಆರ್. ಅನಂತಮೂರ್ತಿಯವರ ಅಗಲಿಕೆಯ ನೆನಪಿನಲ್ಲಿ, ಅವರ ಬರಹಗಳ ಕುರಿತಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಇದಕ್ಕೆ ಬಂದಿರುವ ಸ್ಪಂದನೆಗಳನ್ನು ಕುರಿತು ತೀರ್ಪು ನೀಡುವಂತೆ ಪ್ರೊ.ಚ. ಸರ್ವಮಂಗಳ ( ಕವಿ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರು ಮೈಸೂರು) ಹಾಗೂ ಅವರನ್ನು ಹಾಗೂ ನಿತೇಶ್ ಕುಂಟಾಡಿ( ಋತುಮಾನ ಬ್ಲಾಗ್ ನಿರ್ವಾಹಕರು, ಕ್ರಿಯಾಶೀಲ ಸಾಹಿತ್ಯಾಸಕ್ತ, ಪರಿಚಾರಕ ಬೆಂಗಳೂರು, ) ಅವರು ನೀಡಿರುವ ತೀರ್ಪಿನ ವಿಜೇತರ ಹೆಸರುಗಳನ್ನು ತಿಳಿಸಲಾಗಿದೆ. ಪ್ರಶಸ್ತಿ ಪಡೆದ ವಿಜೇತರು- ಮೊದಲ ಬಹುಮಾನ - ನವೀನ್ ಮಂಡಗದ್ದೆ, ಎರಡನೇ ಬಹುಮಾನ - ಸುಷ್ಮ ಕಶ್ಯಪ್ ಪಡೆದಿದ್ದಾರೆ.
ವಿಜೇತರಿಗೆ ಬಹುಮಾನವನ್ನು ಸದ್ಯದಲ್ಲೇ ಜರುಗುವ ನಟರಾಜ್ ಹುಳಿಯಾರ್ ಅವರ 'ಈವರೆಗಿನ ಬರಹ' ಕುರಿತು ಅವಲೋಕನ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.ಮತ್ತು ಕಾರ್ಯಕ್ರಮದ ದಿನಾಂಕವನ್ನು ಫ಼ೇಸ್ಬುಕ್ ನಲ್ಲಿಯೇ ತಿಳಿಸಲಾಗುವುದು ಎಂದು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಹೆಚ್.ಎಸ್. ರೇಣುಕಾರಾಧ್ಯ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...
ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...
ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...
©2024 Book Brahma Private Limited.