ಬಾಲ್ಯದ ನೆನಪುಗಳನ್ನು ಕೆದಕುವ ಯಶಸ್ವಿ ಕವಿತೆಗಳ ಸಂಕಲನ ‘ಎಂಟಾಣೆ ಪೆಪ್ಪರುಮೆಂಟು’: ಪ್ರಶಂಸೆ

Date: 27-01-2021

Location: ಬೆಂಗಳೂರು


ಬಾಲ್ಯದ ನೆನಪುಗಳನ್ನು ಉದ್ದೀಪನಗೊಳಿಸುವ ಸಮರ್ಥ ಕವಿತೆಗಳು ‘ಎಂಟಾಣೆ ಪೆಪ್ಪರಮೆಂಟು’ ಕವನ ಸಂಕಲನದ ಹೆಚ್ಚುಗಾರಿಕೆ ಎಂದು ವಿಮರ್ಶಕ ಹಾಗೂ ಅನುವಾದಕ ಪ್ರೊ. ಓ.ಎಲ್. ನಾಗಭೂಷಣ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರದಲ್ಲಿ ಕವಿ ಚಂದ್ರು ಎಂ. ಹುಣಸೂರು ಅವರ ಕವಿತಾ ಸಂಕಲನ ‘ಎಂಟಾಣೆ ಪೆಪ್ಪರಮೆಂಟು’ ಬಿಡುಗಡೆ ಸಮಾರಂಭ ಉದ್ಧೇಶಿಸಿ ಅವರು ಮಾತನಾಡಿದರು.

‘ಎಂಟಾಣೆ ಪೆಪ್ಪರಮೆಂಟು’ ಸಂಕಲನದ ಕವಿತೆಗಳು ಬಾಲ್ಯದ ನೆನಪುಗಳನ್ನು ಕೆದಕುವಲ್ಲಿ ಯಶಸ್ವಿಯಾಗಿವೆ. ಬಾಂಧವ್ಯ, ಮಮತೆ, ಗ್ರಾಮೀಣ ಬದುಕು ಈ ಎಲ್ಲವುಗಳ ನೆನಪನ್ನು ಇಲ್ಲಿಯ ಕವಿತೆಗಳು ಮುಗ್ದವಾಗಿ ಕೊಡುತ್ತವೆ. ಇವು ಕವಿತೆಗಳಲ್ಲಿ ಆಪ್ತಗುಣಗಳನ್ನು ತುಂಬಿವೆ ಎಂದು ಹೇಳಿದರು.

ಇತಿಹಾಸ ತಜ್ಞ ಡಾ ಶೆಲ್ವಪಿಳ್ಳೆ ಐಯ್ಯಂಗಾರ್ ಸಮಾರಂಭ ಉದ್ಘಾಟಿಸಿದರು. ಶಿಕ್ಷಕರು ಹಾಗೂ 'ಸ್ಪಂದನ ಸಾಂಸ್ಕೃತಿಕ ಪರಿಷತ್‌' ಅಧ್ಯಕ್ಷ ಟಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...