ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹ


"ಕಥಾ ನಾಯಕಿಯ ಜೀವನ ಯಾವ ರೀತಿ ಬದಲಾಗುತ್ತದೆ? ಅವಳು ಇಷ್ಟಪಟ್ಟ ಜೀವನ ಅವಳಿಗೆ ಸಿಗುತ್ತದೆಯೋ? ಎನ್ನುವ ಪ್ರಶ್ನೆಗಳೊಂದಿಗೆ ಅನೇಕ ಕವಲು ದಾರಿಗಳಿಂದ ಕೂಡಿದ ಅವಳ ರೋಚಕ ಕತೆಯ ಮೂಲಕ, ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ ಲೇಖಕಿ," ಎನ್ನುತ್ತಾರೆ ಮೋಹನ್ ಕುಮಾರ್ ಟಿ. ಅವರು ಫೌಯಿಯ ಸಲೀಂ ಅವರ ‘ಕುಚುಕು’ ಕೃತಿಗೆ ಬರೆದ ಮುನ್ನುಡಿ..

ಫೌಝಿಯ ಸಲೀಂ ಅವರು ಬರೆದಿರುವ ಕುಚುಕು ಕಾದಂಬರಿಯಲ್ಲಿ ಸ್ನೇಹ ಅಂದರೆ ಸುಂದರ ಸಂಬಂಧ ಅಷ್ಟೇ ಅಲ್ಲ, ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ ಎಂಬುದರ ಬಗ್ಗೆ ತಿಳಿಸುತ್ತಾ ಹೋಗುತ್ತಾರೆ. ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು, ನಿಷ್ಠೆಯಿಂದ ಇರುವುದು, ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹವೆನ್ನುತ್ತಾರೆ.

ಶಾಲಾ ದಿನಗಳಿಂದ ಕೊನೆಯ ಉಸಿರಿನ ತನಕ ಜೊತೆಯಾಗಿರುವುದು ಸ್ನೇಹದ ಅಸ್ಮಿತೆ, ಆಟ, ಪಾಠ, ಊಟದ ಜೊತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಒಬ್ಬ ವ್ಯಕ್ತಿ ಹಂಚಿಕೊಳ್ಳುವುದು ಸ್ನೇಹಿತರೊಂದಿಗೆ ಮಾತ್ರ. ಜೀವನದ ಸಂತೋಷ, ಸಂಭ್ರಮ, ನೋವು, ನಲಿವು ಎಲ್ಲವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಮತ್ತು ಕಷ್ಟದ ದಿನಗಳಿಗೆ ಹೆಗಲು ನೀಡುವವರೇ ಸ್ನೇಹಿತರು.

ಕಥಾ ನಾಯಕಿಯ ಜೀವನ ಯಾವ ರೀತಿ ಬದಲಾಗುತ್ತದೆ? ಅವಳು ಇಷ್ಟಪಟ್ಟ ಜೀವನ ಅವಳಿಗೆ ಸಿಗುತ್ತದೆಯೋ? ಎನ್ನುವ ಪ್ರಶ್ನೆಗಳೊಂದಿಗೆ ಅನೇಕ ಕವಲು ದಾರಿಗಳಿಂದ ಕೂಡಿದ ಅವಳ ರೋಚಕ ಕತೆಯ ಮೂಲಕ, ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ ಲೇಖಕಿ. ಬಿದ್ದಾಗ ಮೇಲೆಳಲು ಕೈ ಕೊಡುವ, ಗೆದ್ದಾಗ ಬೆನ್ನು ತಟ್ಟಿ ಬೆಂಬಲಿಸುವ ಗೆಳೆಯರಿದ್ದರೆ ಅದುವೇ ನಾವು ಜೀವನದಲ್ಲಿ ಗಳಿಸುವ ಆಸ್ತಿ ಎಂದರೆ ತಪ್ಪಾಗಲ್ಲ. ಕಷ್ಟಕ್ಕೆ ಯಾರು ಬರುತ್ತಾರೋ ಗೊತ್ತಿಲ್ಲ. ಆದರೆ ಗೆಳೆಯರಂತು ಖಂಡಿತವಾಗಿಯು ಬಂದೇ ಬರುತ್ತಾರೆ ಅನ್ನೋದು ನೂರಕ್ಕೆ ನೂರು ಸತ್ಯ.

MORE FEATURES

ಬೂಕರ್‌ ಅಂಗಳದಲ್ಲಿ ಭಾರತ; ಗೀತಾಂಜಲಿಶ್ರೀ ದಾರಿಯಲ್ಲಿ ಬಾನು ಮುಷ್ತಾಕ್

20-05-2025 ಬೆಂಗಳೂರು

ಅರುಂಧತಿ ರಾಯ್, 1997ರ ಬೂಕರ್‍ ಪ್ರಶಸ್ತಿ ಸಮಾರಂಭದಲ್ಲಿ. 2006 ರಲ್ಲಿ ಪ್ರಶಸ್ತಿ ಪಡೆದ ಕಿರಣ್ ದೇಸಾಯ್. ...

ಲಂಡನ್- ಇಂದು ಬೂಕರ್‌ ಪ್ರಶಸ್ತಿ ಘೋಷಣೆ ; ಪ್ರಶಸ್ತಿ ಕಿರು ಪಟ್ಟಿಯಲ್ಲಿ ಕನ್ನಡದ `ಹೃದಯ ದೀಪ' ಬಾನು ಮುಷ್ತಾಕ್

20-05-2025 ಲಂಡನ್‌

ಲಂಡನ್: ದಕ್ಷಿಣ ಭಾರತ ಭಾಷಾ ಸಾಹಿತ್ಯ ಲೋಕದ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ಕನ್ನಡದ ಲೇಖಕಿಯೊಬ್ಬರು ಈ ಪ್ರತಿಷ್ಠಿತ...

ನಿತ್ಯ ಬದುಕಿನ ವ್ಯವಹಾರದೊಂದಿಗಿನ ಕೌಟುಂಬಿಕ ಚಿತ್ರಣವನ್ನು ಇಲ್ಲಿ ಕಾಣಬಹುದು

18-05-2025 ಬೆಂಗಳೂರು

"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...