Date: 25-08-2019
Location: ಬೆಂಗಳೂರು
ಛಂದ ಪುಸ್ತಕ ಸ್ಪರ್ಧೆಯಲ್ಲಿ ನೂರು ಹಸ್ತಪ್ರತಿಗಳು ಸ್ಪರ್ಧೆಗೆ ಬಂದಿವೆ ಎಂದು ತಿಳಿಸಿರುವ ಕತೆಗಾರ ವಸುಧೇಂದ್ರ ಅವರು ಒಂದು ’ಹಸ್ತಪ್ರತಿಯಲ್ಲಿ ಸುಮಾರು ಎಂಟು ಅಥವಾ ಹತ್ತು ಕತೆಗಳು ಇವೆ ಎಂದು ಪರಿಗಣಿಸಿದರೆ, ಹತ್ತಿರ ಹತ್ತಿರ ಸಾವಿರ ಕತೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದಂತೆ! ಈ ಭರ್ಜರಿ ಭಾಗವಹಿಸುವಿಕೆ ಛಂದಕ್ಕೆ ಸಂಭ್ರಮವನ್ನೂ, ಆತ್ಮಸ್ಥೈರ್ಯವನ್ನೂ ತಂದಿದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.
’ಈ ನೂರು ಹಸ್ತಪ್ರತಿಗಳನ್ನು ಮೊದಲ ಸುತ್ತಿನಲ್ಲಿ ಹಿರಿಯ ಕತೆಗಾರ್ತಿ ಸುಮಂಗಲಾ, ಕತೆಗಾರ ಕರ್ಕಿ ಕೃಷ್ಣಮೂರ್ತಿ ಮತ್ತು ನಾನು ಓದಿದೆವು’ ಎಂದು ತಿಳಿಸಿರುವ ಅವರು ಮೊದಲ ಸುತ್ತಿನಲ್ಲಿ ಹತ್ತು ಜನರನ್ನು ಆಯ್ಕೆ ಮಾಡಿದ್ದೇವೆ. ಈ ಹತ್ತೂ ಹಸ್ತಪ್ರತಿಗಳು ನಿರ್ಣಾಯಕರನ್ನು ತಲುಪಲಿವೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಹುಮಾನ ಯಾರದು ಎನ್ನುವುದನ್ನು ತಿಳಿಸುತ್ತೇವೆ’ ಎಂದು ಹೇಳಿದ್ದಾರೆ.
ಮೊದಲ ಸುತ್ತಿನಲ್ಲಿ ಆಯ್ಕೆಯಾದ ಕೆಳಗಿನ ಎಲ್ಲಾ ಕತೆಗಾರರಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.
ವಿಜಯಶ್ರೀ ಹಾಲಾಡಿ
ಚೈತ್ರಿಕಾ ಹೆಗಡೆ
ಛಾಯಾ ಭಟ್
ಶಶಿ ತರೀಕೆರೆ
ಕೆ.ಎಲ್. ಶ್ರೀವತ್ಸ
ಅಕ್ಷಯ ಪಂಡಿತ್
ಪ್ರಜ್ಞಾ ಮತ್ತಿಹಳ್ಳಿ
ಶ್ರೀರಂಜನ್
ಟಿ.ಎಸ್. ಶ್ರವಣ ಕುಮಾರಿ
ಪ್ರವೀಣ ಕುಮಾರ್ ಜಿ
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.