Date: 03-10-2022
Location: ಬೆಂಗಳೂರು
ಸಿನಿಮಾ ಕಥೆ ಬರೆಯಬೇಂಕೆಂಬ ಕನಸು,ಮಹದಾಸೆ ಅನೇಕರಿಗಿರುತ್ತದೆ. ಅಂಥವರಿಗಾಗಿಯೇ ಅನುಪ್ ಬಂಡಾರಿ ಸಿನಿಮಾ(ABC) ಸಂಸ್ಥೆಯು ಉತ್ತಮ ಅವಕಾಶವೊಂದನ್ನು ತೆರೆದಿರಿಸಿದೆ. ರಂಗಿತರಂಗ, ರಾಜರಥ, ವಿಕ್ರಾತ್ ರೋಣ ನಿರ್ದೇಶಕನ ಕೈಕೆಳಗೆ ಕೆಲಸ ಮಾಡುವ ಸದವಕಾಶ ಇದಾಗಿದೆ.
ಫನ್ ಆಕ್ಷನ್ ನ ಥೀಮ್ ಹೊಂದಿರುವ ಎರಡು ಪುಟದ ಕಥೆ ಬರೆಯುವಂತೆ ABC ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಕೀ ಸಿಚುವೇಶನ್ ನ್ನು ಸಹ ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ಎರಡು ಪುಟಗಳ ಕಥೆ ಹೆಣೆದು ಅಕ್ಟೋಬರ್ 10ರ ಒಳಗೆ anupbhandaricinemas@gmail.com ಗೆ ಕಳಿಸುವಂತೆ ಅನುಪ್ ಬಂಡಾರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಥೆಯ ಎಳೆ ಇಂತಿದೆ "ಒಬ್ಬ ಹುಡುಗ ಮತ್ತು ಒಬ್ಬಳು ಹುಡುಗಿ ತಮ್ಮ ಸ್ನೇಹಿತನ ತಂದೆಯ ಅಂತಿಮ ಸಂಸ್ಕಾರದ ದಿನ ಭೇಟಿಯಾಗುತ್ತಾರೆ. ಪರಿಚಯ ಆಕರ್ಷಣೆಯೆಡೆಗೆ ತಿರುಗುವಷ್ಟರಲ್ಲಿ ಸ್ನೇಹಿತನ ತಂದೆಯ ಶವ ನಾಪತ್ತೆ ಆಗಿರುತ್ತದೆ".
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.