ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಬಿಡುಗಡೆ

Date: 08-09-2019

Location: ಸಿಂದಗಿ


ಚನ್ನಪ್ಪ ಕಟ್ಟಿಯವರ ಏಕತಾರಿಯಲ್ಲಿನ ಕಥೆಗಳು ವೈಚಾರಿಕ ನೆಲೆಯಲ್ಲಿವೆ. ಲೌಕಿಕ ಬದುಕನ್ನು ಅಲೌಕಿಕದೆಡೆಗೆ ಸಾಗಿಸುತ್ತವೆ. ಕಟ್ಟಿಯವರ ಕಥೆಗಳಲ್ಲಿ ಗ್ರಾಮೀಣದ ಸೊಗಡು ಅಡಗಿದ್ದರೂ ಆಧುನಿಕತೆಯಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು.

ಭಾನುವಾರ ಸಿಂದಗಿಯ ಮಾಂಗಲ್ಯ ಭವನದಲ್ಲಿ ಪಲ್ಲವ ಪ್ರಕಾಶನ ಹಾಗೂ ಸ್ಥಳೀಯ ನೆಲೆ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಚನ್ನಪ್ಪ ಕಟ್ಟಿಯವರ ಏಕತಾರಿ ಕಥಾ ಸಂಕಲನ ಬಿಡುಗಡೆಯಾಯಿತು.

ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಲೋಕಾಪುರ ಅವರು ಕಟ್ಟಿಯವರ ಕಥೆ, ಕವನಗಳಲ್ಲಿ ಜನರ ಬದುಕು, ಗ್ರಾಮೀಣ ಹಾಗೂ ನಗರದ ಸೊಗಡು, ಜೀವನ ಮೌಲ್ಯ ಅಡಗಿದೆ ಎಂದರು.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಯಲ ಕನ್ನಡ ವಿಭಾಗದ ಮುಖ್ಯಸ್ಥ ವಿಕ್ರಮ ವಿನಾಜೆ ಅವರು ಏಕತಾರಿ ಪುಸ್ತಕ ಪರಿಚಯಿಸಿ, ಕಟ್ಟಿ ಅವರು ಮಾಸ್ತಿ ಅವರ ನವೋದಯ ಶೈಲಿಯ ಗ್ರಾಮೀಣ ಸೊಗಡು ತುಂಬಿದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...