ಗಣಾಚಾರ

Date: 03-02-2023

Location: ಬೆಂಗಳೂರು


“ಮಡಿವಾಳಯ್ಯ ತನ್ನ ದೇಹವ ಕೊಟ್ಟು, ಗಣಾಚಾರದ ಶಕ್ತಿ ಪ್ರಸಾದವ ಪಡೆದ(ವ:887)’ ಎಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು ಗಣಾಚಾರದ ಶಕ್ತಿ ಬಹುದೊಡ್ಡದೆಂದು ತಿಳಿಸಿದ್ದಾರೆ. ಮಡಿವಾಳ ಮಾಚಿದೇವರು ಮತ್ತು ಹಡಪದಪ್ಪಣ್ಣನಂತವರು ವೀರ ಗಣಾಚಾರಗಳಾಗಿದ್ದರು” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಗಣಾಚಾರ’ ವಿಚಾರದ ಕುರಿತು ಚರ್ಚಿಸಿದ್ದಾರೆ...

ಗಣಾಚಾರವು ಪಂಚಾಚಾರಗಳಲ್ಲಿಯೇ ವಿಶಿಷ್ಟವಾದುದಾಗಿದೆ. ಸಮಾಜವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರದ ವಿರುದ್ಧ ಎದ್ದುನಿಲ್ಲುವುದೇ ಗಣಾಚಾರವಾಗಿದೆ. ಶರಣಸಿದ್ಧಾಂತಗಳ ವಿರುದ್ಧ ನಡೆದಾಗ, ಶರಣರಿಗೆ ಅನ್ಯಾಯವಾದಾಗ, ಶರಣರ ಹತ್ಯೆಗಳಾದಾಗ ಭಕ್ತರು ಸುಮ್ಮನೆ ಕೂಡಬಾರದು, ಅಂತಹ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಗಣಾಚಾರ ಹೇಳುತ್ತದೆ. ಹೀಗಾಗಿ ಗಣಾಚಾರದ ಮೂಲಕ ಬಂಡಾಯವೆಂಬುದು ಶರಣಸಿದ್ಧಾಂತದಲ್ಲಿ ಸೇರಿಕೊಂಡಿದೆ.

ಗಣಾಚಾರದಲ್ಲಿ ಎರಡು ಬಗೆ, ಒಂದು ತನ್ನೊಳಗಡೆ ನಡೆಯುವ ಗಣಾಚಾರ; ಮತ್ತೊಂದು ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ದ ನಡೆಯುವ ಗಣಾಚಾರ. ತಾನು ತಪ್ಪು ಮಾಡಿದಾಗ, ತನ್ನನ್ನೇ ತಿದ್ದಿಕೊಳ್ಳಲು ನಡೆಸುವ ಉಪವಾಸ, ದೇಹದಂಡನೆ ಮೊದಲಾದವುಗಳು ಒಂದು ರೀತಿಯವಾದರೆ, ಸಮಾಜವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ-ಅತ್ಯಾಚಾರದ ವಿರುದ್ಧದ ಪ್ರತಿಭಟನೆಗಳು ಸಾಮಾಜಿಕ ಗಣಾಚಾರವಾಗಿವೆ. ತೆಕ್ಕೆಕಾಯಕದವರು, ಮುಳ್ಳಾವಿಗೆಯವರು, ಶಸ್ತ್ರಕಾಯಕದವರು ಈ ರೀತಿಯ ಗಣಾಚಾರಿಗಳಾಗಿದ್ದರು. ದುಶ್ಚಟಕ್ಕೊಳಗಾದವರ ಮನೆಯ ಕಂಬಕ್ಕೆ ಹಾಯ್ದುಕೊಂಡು ಪ್ರತಿಭಟಿಸುತ್ತಿದ್ದರು. ದುರ್ನಡತೆ ಬಿಡುವವರೆಗೆ ನ್ಯಾಯ ಸಿಗುವವರೆಗೆ ಮುಳ್ಳಾವಿಗೆಯ ಮೇಲೆ ನಿಂತು, ಕಾಲಲ್ಲಿ ರಕ್ತ ಬಂದರೂ ಪ್ರತಿಭಟಿಸುತ್ತಿದ್ದರು. ಇವೆಲ್ಲವುಗಳು ಗಣಾಚಾರದ ಭಾಗಗಳೇ ಆಗಿವೆ.

“ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ,
ಲಿಂಗಾರ್ಪಿತವಲ್ಲದ ಉದಕವ ಮುಕ್ಕುಳಿಸಿದಡೆ
ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ.
ಲಿಂಗಾರ್ಪಿತವಲ್ಲದೆ ಹುಲ್ಲು ಕಡ್ಡಿಯ ಕೊಂಡಡೆ ಬಲ್ಲೆ,
ಮುಂದೆ ಭವ ಘೋರ ನರಕವೆಂಬುದ.
ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು
ಅಳವರಿಯದೆ ನುಡಿದೆನು
ಕಡೆಮುಟ್ಟಿ ಸಲೆಸದಿದ್ದಡೆ, ತಲೆದಂಡ, ತಲೆದಂಡ
ಕೂಡಲಸಂಗಮದೇವಾ.”

-ಬಸವಣ್ಣ(ಸ.ವ.ಸಂ.1.ವ:786)

ಈ ವಚನದಲ್ಲಿ ಬಸವಣ್ಣನವರು ಗಣಾಚಾರದ ಸ್ಪಷ್ಟ ಚಿತ್ರಣವನ್ನು ಕೊಟ್ಟಿದ್ದಾರೆ. ಲಿಂಗಾರ್ಪಿತವಲ್ಲದ ನೀರನ್ನು ಮುಕ್ಕಳಿಸಿದರೂ ಅದು ಗಣಾಚಾರಕ್ಕೆ ಒಳಗಾಗುತ್ತದೆಂದು ಹೇಳಿದ್ದಾರೆ. ಶರಣರ ಸಿದ್ಧಾಂತದ ಪ್ರಕಾರ ನಡೆಯದಿದ್ದರೆ ತಲೆದಂಡ, ತಲೆದಂಡವೆಂದು ಹೇಳಿದ್ದಾರೆ. ಗಣಾಚಾರವು ತಾನು ತಪ್ಪುಮಾಡಿದರೆ, ತನ್ನಷ್ಟಕ್ಕೆ ತಾನೇ ಹಾಕಿಕೊಳ್ಳಬಹುದಾದ ನಿರ್ಬಂಧವಾಗಿದೆ ಮತ್ತು ತನ್ನನ್ನು ತಾನೇ ಶಿಕ್ಷೆಗೊಳ ಪಡಿಸಿಕೊಳ್ಳುವ ವಿಧಾನವಾಗಿದೆ.

‘ಎಲ್ಲ ಜನವಹುದೆಂಬುದೆ ಸದಾಚಾರ, ಹಿಡಿದ ವ್ರತ ನಿಯಮವ ಬಿಡದಿರುವದೆ ನಿಯತಾಚಾರ, ಶಿವನಿಂದೆಯ ಕೇಳದಿಹುದೆ ಗಣಾಚಾರ’ (ಏ:987) ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ಅವರು ಮುಂದುವರೆದು ಕೇವಲ ಶಿವನಿಂದೆ ಮಾತ್ರವಲ್ಲ, ಶಿವಶರಣರ ನಿಂದೆಯನ್ನು ಕೇಳಲಾಗದೆಂದು ತಿಳಿಸಿದ್ದಾರೆ. ‘ಮಡಿವಾಳಯ್ಯ ತನ್ನ ದೇಹವ ಕೊಟ್ಟು, ಗಣಾಚಾರದ ಶಕ್ತಿ ಪ್ರಸಾದವ ಪಡೆದ(ವ:887)’ ಎಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು ಗಣಾಚಾರದ ಶಕ್ತಿ ಬಹುದೊಡ್ಡದೆಂದು ತಿಳಿಸಿದ್ದಾರೆ. ಮಡಿವಾಳ ಮಾಚಿದೇವರು ಮತ್ತು ಹಡಪದಪ್ಪಣ್ಣನಂತವರು ವೀರ ಗಣಾಚಾರಗಳಾಗಿದ್ದರು.

ಸದ್ಭಕ್ತಿ, ಸಮ್ಯಜ್ಞಾನ, ಷಟ್‍ಸ್ಥಲ ಮಾರ್ಗವ ಹಿಡಿದು ನಿಜಾಚರಣೆಯಲ್ಲಿ ಆಚರಿಸುವವರೇ ಶಿವಭಕ್ತರು, ಇಂತಹ ಶಿವಭಕ್ತರಿಗೆ ಯಾರಾದರೂ ಅನ್ಯಾಯ ಮಾಡಿದರೆ ತಾನು ಸಹಿಸುವುದಿಲ್ಲವೆಂದು ಅಂಬಿಗರ ಚೌಡಯ್ಯ ಹೇಳಿದ್ದಾರೆ, ದರ್ಪ ತೋರಿಸುವವರನ್ನು, ದುರಾಚಾರಿಗಳನ್ನು ಸುಮ್ಮನೆ ಬಿಡಬಾರದೆಂದು ಚೌಡಯ್ಯನವರು ತಿಳಿಸಿದ್ದಾರೆ.

“.........ಗುರುಲಿಂಗಜಂಗಮ ಪಾದೋದಕ ಪ್ರಸಾದ
ಭಸ್ಮ ರುದ್ರಾಕ್ಷಿ ಮಂತ್ರಗಳೆಂಬ ಅಷ್ಟಾವರಣಗಳು
ತನ್ನ ಪ್ರಣವ ಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ
ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ”
-ಅಕ್ಕಮಹಾದೇವಿ(ಸ.ವ.ಸಂ.5,ವ:314)

ಅಕ್ಕಮಹಾದೇವಿ ಈ ವಚನದಲ್ಲಿ ಗಣಾಚಾರದ ಸ್ಪಷ್ಟಕಲ್ಪನೆಯನ್ನು ನೀಡಿದ್ದಾರೆ. ಅಷ್ಟಾವರಣಗಳು ಶಿವಭಕ್ತನ ಅಂಗವಾಗಿವೆ. ಇಂತಹ ಅಷ್ಟಾವರಣಗಳ ಕುರಿತು ಯಾರಾದರೂ ತುಚ್ಛವಾಗಿ ಮಾತನಾಡಿದರೆ, ನಿಂದಿಸಿದರೆ, ಅಂತಹ ನಿಂದೆಯನ್ನು ಕೇಳಿ ಸೈರಿಸಬಾರದು ಅಂತವರನ್ನು ಶಿಕ್ಷೆಗೊಳಪಡಿಸಬೇಕು, ಅದೇ ಗಣಾಚಾರವೆಂದು ಸ್ಪಷ್ಟಪಡಿಸಿದ್ದಾರೆ. ಹೀಗೆ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಗಣಾಚಾರದ ಬಗೆಗೆ ಚರ್ಚಿಸಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಐಕ್ಯಸ್ಥಲ
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...