Date: 03-05-2021
Location: ಬೆಂಗಳೂರು
ಹಿರಿಯ ಕವಿ, ಲೇಖಕ ದೇಶಪಾಂಡೆ ಸುಬ್ಬರಾಯರು ಸೋಮವಾರ (02 ಮೇ) ಧಾರವಾಡದಲ್ಲಿ ನಿಧನರಾದರು.
ಬೇಂದ್ರೆಯವರ ಕಾವ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ದೇಶಪಾಂಡೆ, ಮೂಲತಃ ಮಹಾರಾಷ್ಟ್ರದ ಪುಣೆ ಸಮೀಪದ 'ವಠಾರ' ಗ್ರಾಮದವರು. ರೈಲ್ವೆ ಇಲಾಖೆಯಲ್ಲಿ ನಾಲ್ಕು ದಶಕಗಳ ಕಾಲ ಕಾರ್ಯನಿರ್ವಹಿಸಿ ಉನ್ನತ ಅಧಿಕಾರಿಯಾಗಿ ನಿವೃತ್ತರಾಗಿದ್ದರು.
‘ನಾಲ್ಕು ಹಿಡಿ ಬೆಂಕಿ’, ‘ಬೊಗಸೆ ತುಂಬದ ಬದುಕು’, ‘ಕಣ್ಣೀರು ಕಳಕೊಂಡವನು’, ‘ಜಫರನೆ ಇಲ್ಲ ದೆಹಲಿಯಲ್ಲಿ’, ‘ಮೋರೆಯಾಚೆಯ ಮುಖ’, ‘ಫೀನಿಕ್ಸ್ ಹಾರಿದ ಹಾದಿ’ ಸೇರಿದಂತೆ ಹಲವು ಕವನ ಸಂಕಲನಗಳನ್ನು ಹಾಗೂ ‘ಕನ್ನಡ ಸಾಹಿತ್ಯದಲ್ಲಿ ನವ್ಯ ಪ್ರಜ್ಞೆ’, ‘ಸಂತೆಯಲ್ಲೊಂದು ಮನೆ’, ‘ಮಾಸದ ವ್ಯಾಸಂಗ’ ಎಂಬ ಗದ್ಯ ಕೃತಿಗಳನ್ನು ರಚಿಸಿದ್ದರು. ಇವರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಮುದ್ದಣ ಕಾವ್ಯ ಪ್ರಶಸ್ತಿ ಲಭಿಸಿತ್ತು.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.