ಹಿರಿಯ ಕವಿ ದೇಶಪಾಂಡೆ ಸುಬ್ಬರಾಯರು ಇನ್ನಿಲ್ಲ

Date: 03-05-2021

Location: ಬೆಂಗಳೂರು


ಹಿರಿಯ ಕವಿ, ಲೇಖಕ ದೇಶಪಾಂಡೆ ಸುಬ್ಬರಾಯರು ಸೋಮವಾರ (02 ಮೇ) ಧಾರವಾಡದಲ್ಲಿ ನಿಧನರಾದರು.

ಬೇಂದ್ರೆಯವರ ಕಾವ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ದೇಶಪಾಂಡೆ, ಮೂಲತಃ ಮಹಾರಾಷ್ಟ್ರದ ಪುಣೆ ಸಮೀಪದ 'ವಠಾರ' ಗ್ರಾಮದವರು. ರೈಲ್ವೆ ಇಲಾಖೆಯಲ್ಲಿ ನಾಲ್ಕು ದಶಕಗಳ ಕಾಲ ಕಾರ್ಯನಿರ್ವಹಿಸಿ ಉನ್ನತ ಅಧಿಕಾರಿಯಾಗಿ ನಿವೃತ್ತರಾಗಿದ್ದರು.

‘ನಾಲ್ಕು ಹಿಡಿ ಬೆಂಕಿ’, ‘ಬೊಗಸೆ ತುಂಬದ ಬದುಕು’, ‘ಕಣ್ಣೀರು ಕಳಕೊಂಡವನು’, ‘ಜಫರನೆ ಇಲ್ಲ ದೆಹಲಿಯಲ್ಲಿ’, ‘ಮೋರೆಯಾಚೆಯ ಮುಖ’, ‘ಫೀನಿಕ್ಸ್ ಹಾರಿದ ಹಾದಿ’ ಸೇರಿದಂತೆ ಹಲವು ಕವನ ಸಂಕಲನಗಳನ್ನು ಹಾಗೂ ‘ಕನ್ನಡ ಸಾಹಿತ್ಯದಲ್ಲಿ ನವ್ಯ ಪ್ರಜ್ಞೆ’, ‘ಸಂತೆಯಲ್ಲೊಂದು ಮನೆ’, ‘ಮಾಸದ ವ್ಯಾಸಂಗ’ ಎಂಬ ಗದ್ಯ ಕೃತಿಗಳನ್ನು ರಚಿಸಿದ್ದರು. ಇವರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಮುದ್ದಣ ಕಾವ್ಯ ಪ್ರಶಸ್ತಿ ಲಭಿಸಿತ್ತು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...