ಜಲಾಲ್ ಅಲ್ -ಏ-ಅಹಮ್ಮದ್ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಅರ್ಹ ಕಥೆ-ಕಾದಂಬರಿಗಳಿಲ್ಲ….!

Date: 22-01-2021

Location: ಬೆಂಗಳೂರು


ಇರಾನ್ ನ ಪ್ರತಿಷ್ಠಿತ 13ನೇ ಜಲಾಲ್ ಅಲ್ -ಎ-ಅಹಮ್ಮದ್ ಸಾಹಿತ್ಯ ಪ್ರಶಸ್ತಿ ನೀಡಲು ಈ ಬಾರಿ ಅರ್ಹ ಕಥೆಗಳು ಹಾಗೂ ಕಾದಂಬರಿಗಳೇ ಇಲ್ಲ ಎಂದು ತೀರ್ಪುಗಾರರು ಇರಾನ್ ರಾಜಧಾನಿ ತೆಹರಾನ್ ನಲ್ಲಿಯ ಪ್ರಮುಖ ವಾಹಿನಿ ಐಆರ್ ಐಬಿ(4) ಗೆ ಹೇಳಿಕೆ ನೀಡಿದ್ದಾರೆ.

2020 ರ ಅವಧಿಯಲ್ಲಿ ಬರೆದ ಕಥೆ ಹಾಗೂ ಕಾದಂಬರಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿತ್ತು. ಪ್ರಸಕ್ತ ವರ್ಷ (2021) ಪ್ರಶಸ್ತಿಯ ಮೊತ್ತವನ್ನು 9.10 ಲಕ್ಷ ರೂ.ಗಳಿಗೆ ಹೆಚ್ಚಿಸಿತ್ತು. ಆದರೆ, ಜಲಾಲ್ ಅಲ್ -ಎ-ಅಹಮ್ಮದ್ ಸಾಹಿತ್ಯ ಪ್ರಶಸ್ತಿ ನೀಡಲು ಅರ್ಹವಾದ ಕಥೆ-ಕಾದಂಬರಿಗಳು ಇಲ್ಲ. ಮನ್ಸೂರು ಅಲಿಮರಡಿ ಅವರ ‘ಮಿಡ್ ಡೆ ಇನ್ ಕಾಂಟೇಶನ್ಸ್’ ಕಾದಂಬರಿಯನ್ನುಗೌರವಾನ್ವಿತವಾಗಿ ಪರಿಗಣಿಸಬಹುದು. ಆದರೆ, ಪೂರ್ಣ ಪ್ರಶಸ್ತಿ ಘೋಷಣೆಗೆ ಅರ್ಹವಾಗಿಲ್ಲ ಎಂದು ತೀರ್ಪುಗಾರರಾದ ಪೈಕಿ ಸೈಯದ್ ತಷಕ್ಕೊರಿ, ಜಾವೆದ್ ಅಫ್ಮಿ ಹಾಗೂ ಅಲಿ ಚಾಂಗಿಜಿ ತಿಳಿಸಿದ್ದಾರೆ.

ಪ್ರಶಸ್ತಿಗಾಗಿ ಬಂದ ಎಲ್ಲ ಕಥೆಗಳು ರಚನೆ ಹಾಗೂ ವಿಷಯದ ದೃಷ್ಟಿಯಿಂದ ಒಪ್ಪುವಂತಹವಲ್ಲ. ಕಥೆಗಳು ಪ್ರಶಸ್ತಿಗೆ ಆಯ್ಕೆ ಮಾಡಲು ಯಾವುದೇ ತಾಂತ್ರಿಕ ಹಾಗೂ ವೃತ್ತಿಪರ ಸಮರ್ಥನೆಗಳು ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸಾಹಿತ್ಯ ವಿಮರ್ಶೆ, ಸಾಕ್ಷ್ಯಚಿತ್ರ ನಿರ್ಮಾಣ ಸೇರಿದಂತೆ 1980-88 ರ ಅವಧಿಯಲ್ಲಿ ನಡೆದ ಯುದ್ಧಕ್ಕೆ ಸಂಬಂಧಿಸಿ, ‘ಸಿಕ್ರೆಡ್ ಡಿಫೆನ್ಸ್ ಇನ್ ಇರಾನ್’ ಎಂಬ ವಿಶೇಷ ಶಿರ್ಷಿಕೆಯಡಿ ಅರ್ಜಿ ಆಹ್ವಾನಿಸಿದ್ದು, ಆ ಪೈಕಿ 12 ಸಾಹಿತ್ಯ ಕೃತಿಗಳು ಆಯ್ಕೆಯಾಗಿವೆ ಎಂದೂ ಅವರು ಹೇಳಿದ್ದಾರೆ.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...