Date: 16-11-2019
Location: ಬೆಂಗಳೂರು
ಕಾನ್ ಕೇವ್ ಮೀಡಿಯಾ ಪ್ರಕಟಿಸಿರುವ ಸೋಮು ರೆಡ್ಡಿಯವರ ಕಂದೀಲು ಪುಸ್ತಕವನ್ನು ಖ್ಯಾತ ಲೇಖಕ ಜೋಗಿಯವರು ಲೋಕಾರ್ಪಣೆ ಮಾಡಿದರು. "ಹಳ್ಳಿಯ ರಾತ್ರಿ ಸಂಭ್ರಮಗಳಲ್ಲಿ ಕಂದೀಲು ಹಿಡಿದುಕೊಂಡು ಹೋಗುವುದು ಒಂದು ಸಂಸ್ಕೃತಿ. ಸಂಭ್ರಮದಲ್ಲಿ ಇರುವವರಿಗೆ ಬೆಳಕಾಗುವ ಕಂದೀಲು. ನಮ್ಮಲ್ಲಿ ಹಲವು ಸಂಸ್ಕೃತಿಗಳು, ಆಚರಣೆಗಳು, ಭಾಷಾ ಸೊಗಡು, ನೋವು ನಲಿವುಗಳೆಲ್ಲವು ಬರಹದ ಮೂಲಕ ಅಭಿವ್ಯಕ್ತಿಗೊಳ್ಳಬೇಕಿದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. "ಬಾಲ್ಯದ ನೇಟಿವಿಟಿಯನ್ನು ಆಧರಿಸಿ ಬರೆದ ಕಾದಂಬರಿ ಇದು. ಜನರಿಗೆ ಮುಟ್ಟುವ ಹಾಗೆ ಭಾಷೆಯನ್ನು ನಾನು ಬರೆದಿದ್ದೇನೆ. ಇದು ನನ್ನಕ್ಕರೆಯ ಅಕ್ಷರ ಪ್ರೀತಿ" ಎಂದು ನೆನೆಸಿಕೊಂಡರು. ಪತ್ರಕರ್ತ ಶರಣು ಹುಲ್ಲೂರು, ಪ್ರಕಾಶಕ ನಂದೀಶ್ ಅವರು ಹಾಜರಿದ್ದರು.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.