Date: 31-10-2020
Location: ಬೆಂಗಳೂರು
ಕರ್ನಾಟಕ ರಾಜ್ಯೋತ್ಸವದ ಪ್ರಯಕ್ತ ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಯ ಕನ್ನಡ ವಿವಿ ಪ್ರಸಾರಂಗ, ನವಕರ್ನಾಟಕ ಪ್ರಕಾಶನ, ಛಂದ ಪ್ರಕಾಶನ ಸೇರಿದಂತೆ ವಿವಿಧ ಪ್ರಕಾಶನ ಸಂಸ್ಥೆಗಳು ತಮ್ಮ ಪ್ರಕಟಣೆಯ ಪುಸ್ತಕಗಳ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿವೆ. ನವೆಂಬರ್ ತಿಂಗಳಿನಾದ್ಯಂತ ಈ ಸೌಲಭ್ಯ ದೊರೆಯಲಿದೆ.
ನವಕರ್ನಾಟಕ ಪ್ರಕಾಶನ ಹಾಗೂ ಹಂಪಿಯ ಕನ್ನಡ ವಿವಿ ಪ್ರಸಾರಂಗ : ತಮ್ಮ ಪ್ರಕಟಣೆಯ ಎಲ್ಲ ಕನ್ನಡ ಪುಸ್ತಕಗಳ ಮೇಲೆ ಶೇ.50 ರವರೆಗೆ ವಿಶೇಷ ರಿಯಾಯಿತಿ ದರ ನೀಡಿ ಮಾರಾಟ ಮಾಡಲಿವೆ.
ಛಂದ ಪುಸ್ತಕ ಪ್ರಕಾಶನ: 400 ರೂ. ಮೌಲ್ಯದ ಪುಸ್ತಕಗಳ ಖರೀದಿ ಮೇಲೆ ಶೇ.10, 800 ರೂ.ಮೌಲ್ಯದ ಪುಸ್ತಕಗಳಿಗೆ ಶೇ.12, 1500 ರೂ. ಮೌಲ್ಯದ ಪುಸ್ತಕಗಳಿಗೆ ಶೇ.15 ಹಾಗೂ 1500 ರೂ. ಮತ್ತು ಅದಕ್ಕೂ ಹೆಚ್ಚಿನ ಮೌಲ್ಯದ ಪುಸ್ತಕಗಳ ಮೇಲಿನ ಖರೀದಿಗೆ ಶೇ.20 ರಿಯಾಯಿತಿ ನೀಡುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಪ್ರಕಟಣೆಯ ಎಲ್ಲ ಪುಸ್ತಕಗಳಿಗೆ ಶೇ.10 ರಿಂದ ಶೇ. 75ರವರೆಗೆ ರಿಯಾಯಿತಿ ನೀಡುತ್ತಿದೆ. 2020ರ ನವೆಂಬರ್ 1 ರಿಂದ 30ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಎಲ್ಲ ರಜಾ ದಿನಗಳೂ ಸೇರಿದಂತೆ ಪುಸ್ತಕ ಮಾರಾಟ ಇರುತ್ತದೆ. ವಿವರ ಈ ಕೆಳಕಂಡಂತಿದೆ.
ಕ್ರ.ಸಂ. | ಪುಸ್ತಕಗಳ ವಿವರ | ಸಾಮಾನ್ಯ ಎಲ್ಲರಿಗೂ ವಿಶೇಷ ರಿಯಾಯಿತಿ |
1 | ಕನ್ನಡ ರತ್ನಕೋಶ, ಸಂಕ್ಷಿಪ್ತ ಕನ್ನಡ ನಿಘಂಟು ಹಾಗೂ ಸಂಕ್ಷಿಪ್ತ ಕನ್ನಡ ಇಂಗ್ಲೀಷ್ ನಿಘಂಟು | ಶೇ.10 |
2 | ಬೃಹತ್ ಕನ್ನಡ-ಕನ್ನಡ ನಿಘಂಟು (1-8ಸಂಪುಟ) | ಶೇ.50 |
3 | ದಲಿತ ಸಾಹಿತ್ಯ ಸಂಪುಟಗಳು | ಶೇ.50 |
4 | ಗದ್ಯಾನುವಾದ ಪುಸ್ತಕಗಳು, ಶತಮಾನೋತ್ಸವ ಮಾಲಿಕೆ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಪರೀಕ್ಷೆ ಪುಸ್ತಕಗಳು ಹಾಗೂ ಇತರೆ ಹೊಸ ಪುಸ್ತಕಗಳು | ಶೇ.35 |
5 | ಅಖಿಲ ಭಾ ಕ ಸಾ ಸಮ್ಮೇಳನ ಪುಸ್ತಕಗಳು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ಪುಸ್ತಕಗಳು,ಪಿ.ಹೆಚ್.ಡಿ. ಮತ್ತು ಜೀವನ ಚರಿತ್ರೆ ಪುಸ್ತಕಗಳು | ಶೇ.50 |
6 | ಸ್ಮರಣ ಸಂಚಿಕೆಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕಗಳು ಹಾಗೂ ಬೀದರ್ ಸಮ್ಮೇಳನ ಪುಸ್ತಕಗಳು | ಶೇ.75 |
ಆಸಕ್ತರು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.