Date: 13-01-2022
Location: ಚೆನ್ನೈ
ಚೆನ್ನೈನ ಕನ್ನಡ ಬಳಗ ಪ್ರಕಾಶನದಲ್ಲಿ ಪ್ರಕಟಗೊಳ್ಳುತ್ತಿರುವ ಲಹರಿ ಪತ್ರಿಕೆ ಯುಗಾದಿ ವಿಶೇಷ ಸಂಚಿಕೆ ಹೊರತರುತ್ತಿದ್ದು, ಈ ಹಿನ್ನೆಲೆಯಲ್ಲಿ ಲಹರಿ ಕಥೆ ಸ್ಪರ್ಧೆ ಯನ್ನು ಆಯೋಜಿಸಿದೆ. ದೇಶ-ವಿದೇಶದ ಯಾವುದೇ ಪ್ರದೇಶದಲ್ಲಿ ನೆಲೆಸಿರುವ ಕನ್ನಡಿಗರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕಥಾ ವಿಭಾಗದಲ್ಲಿ ಪ್ರಥಮ/ದ್ವಿತೀಯ/ತೃತೀಯ ಬಹುಮಾನಗಳಿದ್ದು ಅನುಕ್ರಮವಾಗಿ 5000/3000/2000 ರೂಪಾಯಿ ಬಹುಮಾನ ನಿಗದಿಪಡಿಸಲಾಗಿದೆ. ಇದರೊಂದಿಗೆ ತಲಾ 500 ರೂ.ಗಳ ಐದು ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ. ಬಹುಮಾನಕ್ಕೆ ಆಯ್ಕೆಯಾಗದ, ಪ್ರಕಟಣೆಗೆ ಯೋಗ್ಯವೆನಿಸಿದ ಬರಹಗಳನ್ನು ಪತ್ರಿಕೆಯ ಮುಂದಿನ ಸಂಚಿಕೆಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ಲಹರಿ ಪತ್ರಿಕೆಯ ಸಂಪಾದಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮಗಳು: ಕಥೆ ಸ್ವಂತದ್ದಾಗಿರಬೇಕು. ಬೇರೆಲ್ಲೂ ಪ್ರಕಟಗೊಂಡಿರಬಾರದು. ಕಥೆ ನುಡಿ ಬರವಣಿಗೆಯಲ್ಲಿ ಟೈಪ್ ಮಾಡಿದ ನಾಲ್ಕರಿಂದ ಐದು ಎ4 ಸೈಜ್ ಪೇಜನ್ನು ಮೀರಬಾರದು.
ತಮ್ಮ ಬರಹಗಳನ್ನು ಫೋಟೋ, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಫೆಬ್ರವರಿ 5, 2022ಕ್ಕೆ ಮುನ್ನ ತಲುಪುವಂತೆ ಕಳುಹಿಸಬೇಕು.
ಸಂಪಾದಕರು, ಲಹರಿ, ಕನ್ನಡ ಬಳಗ ಸೋಷಿಯೋಕಲ್ಬರಲ್ ಅಸೋಸಿಯೇಷನ್, Clo ಜಯಂತಿ ಪ್ರಿಂಟರ್ ನಂ. 5, ಗೋವಿಂದರಾಜನ್ ರಸ್ತೆ, ಪುಲಿಯೂರುಪುರಂ, ಕೋಡಂಬಾಕಮ್, ಚೆನ್ನೈ-600 024 ಇಲ್ಲಿಗೆ ಕಳುಹಿಸಬೇಕು.
ಅಥವಾ laharibalaga@gmail.com ಇಲ್ಲಿಗೆ ಸಾಫ್ಟ್ಕಾಪಿಯ ವರ್ಡ್ ಮತ್ತು ಪಿಡಿಎಫ್ ಕಾಪಿಯನ್ನು ಈಮೇಲ್ ಮಾಡಬಹುದು.
ಹೆಚ್ಚಿನ ಮಾಹಿತಿಗೆ 9962035934/9449821225
ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...
ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...
ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...
©2024 Book Brahma Private Limited.