ಲೇಖಕ, ಪ್ರಕಾಶಕ ಪ್ರಶಸ್ತಿಗೆ ಆಯ್ಕೆ ಪ್ರಕಟ

Date: 25-10-2019

Location: ಕೆ.ಎ. ಶಂಕರೇಗೌಡ ಶತಮಾನೋತ್ಸವ ಭವನ ಸಭಾಂಗಣ, ಕರ್ನಾಟಕ ಸಂಘ, ಮಂಡ್ಯ ನಗರ.


ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2018ನೇ ಸಾಲಿನ ವರ್ಷದ ಲೇಖಕ, ಯುವ ಲೇಖಕ ಮತ್ತು ಪ್ರಕಾಶಕ ಪ್ರಶಸ್ತಿಗಳಿಗೆ ಅರ್ಹ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಎಸ್.ಗಂಗಾಧರಯ್ಯ ಅವರ ’ದೇವರ ಕುದುರೆ ಕಥಾ ಸಂಕಲನ’ಕ್ಕಾಗಿ 'ಹೇಮಂತ- ವರ್ಷದ ಲೇಖಕ' ಪ್ರಶಸ್ತಿ , ಫಕೀರ ಅವರ ’ಶ್ರೀಧರ ಬನವಾಸಿ-ವೃಕ್ಷಮಾತೆ ತಿಮ್ಮಕ್ಕ’ ನಾಟಕಕ್ಕಾಗಿ ’'ಸಂವಹನ- ವರ್ಷದ ಯುವ ಲೇಖಕ' ಪ್ರಶಸ್ತಿ ಮತ್ತು ಮೈಸೂರು ಭಾರತೀ ಪ್ರಕಾಶನ ಬಿ.ಎನ್.ಶ್ರೀನಿವಾಸ್ ಅವರಿಗೆ 'ಕಣ್ವ-ವರ್ಷದ ಪ್ರಕಾಶಕ' ಪ್ರಶಸ್ತಿ ಲಭಿಸಿದೆ. ವರ್ಷದ ಲೇಖಕ ಮತ್ತು ಪ್ರಕಾಶಕ ಪ್ರಶಸ್ತಿಯು ತಲಾ 20 ಸಾವಿರ ರೂ. ನಗದು, ಯುವ ಲೇಖಕ ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ಅಕ್ಟೋಬರ್‌ 25 ಬೆಳಿಗ್ಗೆ 11.00 ಗಂಟೆಗೆ ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ಎ. ಶಂಕರೇಗೌಡ ಶತಮಾನೋತ್ಸವ ಭವನ ಸಭಾಂಗಣದಲ್ಲಿ ನಡೆಯುವ ನೂರು ಶಾಲೆಗಳಿಗೆ ನೂರು ನೂರು ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...