Date: 06-08-2020
Location: ಬೆಂಗಳೂರು
ಅಂಕೋಲದ ದಿನಕರ ದೇಸಾಯಿ ಪ್ರತಿಷ್ಠಾನವು ನೀಡುವ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಗೆ ಲೇಖಕಿ ಮಾಧವಿ ಭಂಡಾರಿ ಕೆರಕೋಣ ಅವರ 'ಮೌನ ಗರ್ಭದ ಒಡಲು' ಕವನ ಸಂಕಲನ ಆಯ್ಕೆಯಾಗಿದೆ. ಈ ಕವನ ಸಂಕಲನವನ್ನು ಕೆರೆಕೋಣದ ಬಂಡಾಯ ಪ್ರಕಾಶನ ಪ್ರಕಟಿಸಿದೆ.
ಈ ಪುರಸ್ಕಾರವು 15 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ದಿನಕರ ದೇಸಾಯಿ ಅವರ ಹುಟ್ಟಿದ ದಿನದಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಮಾಧವಿ ಭಂಡಾರಿ ಕೆರೆಕೋಣ ಅವರು 1962 ಜುಲೈ 22 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಜನಿಸಿದರು. ’ಹರಿದ ಸ್ಕರ್ಟಿನ ಹುಡುಗಿ, ಕಡಲು ಕಳೆದಿದೆ' ಅವರ ಕವನ ಸಂಕಲನ. ’ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ ಸಂದಿದೆ
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.