Date: 17-10-2020
Location: ಬೆಂಗಳೂರು
ಹಾಸನದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಕೇಂದ್ರ ಸಮಿತಿ ಮತ್ತು ಜಿಲ್ಲಾ ಘಟಕದಿಂದ ಹೊಳೆನರಸೀಪುರ ತಾಲ್ಲೂಕು ಘಟಕ ಪ್ರಾಯೋಜಕತ್ವದಲ್ಲಿ 2020ರ ಅಕ್ಟೋಬರ್ 17, 18 ಮತ್ತು 19-ಹೀಗೆ ಮೂರು ದಿನಗಳ ಕಾಲ ಅಂತಾರಾಜ್ಯ ಮಟ್ಟದ ಅಂತರ್ಜಾಲ ಆಧಾರಿತ ಚಿತ್ರ ಕವನ ರಚನೆ ಮತ್ತು ವಾಚನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಿಬಂಧನೆಗಳು :
* ಚಿತ್ರ ಕವಿತೆಯು 16 ರಿಂದ 20 ಸಾಲುಗಳ ಮಿತಿಯಲ್ಲಿ ಇರಬೇಕು.
* ಚಿತ್ರದ ಹಿನ್ನೆಲೆಗೆ ಪೂರಕವಾದ ಆಶಯವನ್ನು ಬಿಂಬಿಸುವಂತಿರಬೇಕು.
* ಒಬ್ಬರು ಒಂದೇ ಚಿತ್ರ ಕವಿತೆಯನ್ನು ಮಾತ್ರ ಕಳಿಸಬೇಕು.
* ಚಿತ್ರ ಕವಿತೆಯ ಅಕ್ಷರ ದೋಷವಿಲ್ಲದ ಮುದ್ರಣ ರೂಪ , ಗಾಯನದ ಧ್ವನಿಮುದ್ರಣ (ಆಡಿಯೋ) ಮತ್ತು ಸ್ವಪರಿಚಯದ 30 ಸೆಕೆಂಡ್ ಗಳ ವಿಡಿಯೋ ತುಣುಕುಗಳನ್ನು ಕಳುಹಿಸಬೇಕು.
* ಫೋಟೋ ರೂಪದಲ್ಲಿ ಕಳಿಸುವ ಚಿತ್ರ ಕವಿತೆಯನ್ನು ಕಡ್ಡಾಯವಾಗಿ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
* ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ₹ 501, ₹401 ಮತ್ತು ₹301 ನಗದು ಬಹುಮಾನ ನೀಡಲಾಗುತ್ತದೆ.
* ನಂತರದ ಹತ್ತು ಅತ್ಯುತ್ತಮ ಚಿತ್ರ ಕವಿತೆ ರಚನೆಕಾರಿಗೆ "ಟಾಪ್-10" ಗೌರವದ ಜೊತೆಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು.
* ಆನಂತರದ 10 ಉತ್ತಮ ಚಿತ್ರ ಕವಿತೆಗಳಿಗೆ ‘ತೀರ್ಪುಗಾರರ ಮೆಚ್ಚುಗೆ’ ಗೌರವವನ್ನು ನೀಡಲಾಗುತ್ತದೆ.
* ಗೊಂದಲಗಳಿದ್ದರೆ ವೈಯಕ್ತಿಕವಾಗಿ ಆಯೋಜಕರನ್ನು ಸಂಪರ್ಕಿಸಬೇಕು.
* ತೀರ್ಪುಗಾರರ ನಿರ್ಣಯವೇ ಅಂತಿಮ.
ಸಂಪರ್ಕ ಸಂಖ್ಯೆ : 7353982585, 7795890110, 8123864114, 8277099823, 9449311298
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.