Date: 17-02-2020
Location: ಮೈಸೂರು
ಮಹಾರಾಜ ಕಾಲೇಜಿನ ಜೂನಿಯರ್ ಕಾಲೇಜಿನಲ್ಲಿ ಕುವೆಂಪು ಅವರ ‘ಸಂಸ್ಮರಣೆ ಹಾಗು ಸಾಹಿತ್ಯವಲೋಕನ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿಟಾ ವಿಮ್ಲಾ ಬ್ರಾಗ್ಸ್ ,ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ . ನಾಗರಾಜ್,ಕನ್ನಡ ವಿಭಾಗದ ಮುಖ್ಯಸ್ಥರಾದ ವಿಶ್ವನಾಥ್, ಡಾ ಸುರೇಶ್ ಹಾಗೂ ಅತಿಥಿಗಳಾಗಿ ಆಗಮಿಸಿದ ಗಾಂಧಿ ಅಧ್ಯಯನ ಕೇಂದ್ರ ಮೈ.ವಿ.ವಿ ನಿರ್ದೇಶಕರಾದ ಎಂ. ಎಸ್. ಶೇಖರ್, ಕನ್ನಡ ಸಂಘದ ಉಪಾಧ್ಯಕ್ಷರಾದ ಯುವ ಸಾಹಿತಿ ರಾಜೇಶ್ ಬಿ ಹೊನ್ನೇನಹಳ್ಳಿ ನೆರೆವೇರಿಸಿದರು.
ಕುವೆಂಪು ಸಾಹಿತ್ಯವಲೋಕನ ಕುರಿತು ಉಪನ್ಯಾಸ ನೀಡಿದ ಶೇಖರ್ ಕುವೆಂಪು ಅವರ ವಿಚಾರಧಾರೆ-ಲೌಕಿಕ ನಿಲುವುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿನ ಕುವೆಂಪುರವರ ಸೂಕ್ಷ್ಮ ಬರಹಗಳನ್ನು ಗ್ರಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ರಮೇಶ್ ಬಿ. ಹೊನ್ನೇನಹಳ್ಳಿ ಸೇರಿದಂತೆ ವಿದ್ಯಾರ್ಥಿಗಳು, ಇನ್ನಿತರ ಸಾಹಿತ್ಯಾಸ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.