Date: 06-07-2020
Location: ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯೋಗಿ ನಾರೇಯಣರ (ಕೈವಾರ ತಾತಯ್ಯ) ಕುರಿತಾದ ರಾಷ್ಟ ಮಟ್ಟದ ಅಂತರ್ಜಾಲ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯ ನಿಬಂಧನೆಗಳು:-
👉 "ರಾಷ್ಟ್ರ ಮಟ್ಟದ ಕೈವಾರ ತಾತಯ್ಯ ಕವನ ಸ್ಪರ್ಧೆಗಾಗಿ"- ಎಂದು ನಮೂದಿಸಿರಬೇಕು.
👉 ಕವನವು ನಿಮ್ಮದೇ ಆದ ಶೀರ್ಷಿಕೆ ಒಳಗೊಂಡಿರಬೇಕು.
👉 ಕವನ ಸ್ಪರ್ಧೆಯ ದಿನಾಂಕ : ಶ್ರಾವಣ ಮಾಸದ ಮೊದಲನೇ ಶನಿವಾರ (25.07.2020) ಪೂರ್ಣ ದಿನವಿರುತ್ತದೆ.
👉 ಕವನಗಳು ಯೋಗಿ ನಾರೇಯಣರ ಕಾಲಜ್ಞಾನ, ಬದುಕು, ಬರಹ, ಐತಿಹ್ಯಗಳು ಒಟ್ಟಾರೆ ಯೋಗಿ ನಾರೇಯಣರ (ಕೈವಾರ ತಾತಯ್ಯ) ಕುರಿತದ್ದಾಗಿರಬೇಕು.
👉 ಕವನಗಳನ್ನು ವಾಟ್ಸಾಪ್ ನಲ್ಲಿ ಟೈಪಿಸಿರಬೇಕು; 24-30 ಸಾಲುಗಳ ಮಿತಿಯಲ್ಲಿರಬೇಕು .
👉 ಇಮೇಜ್ ರೂಪದ ಬರಹಗಳನ್ನು ಸ್ವೀಕರಿಸುವುದಿಲ್ಲ.
👉 ನಿಮ್ಮ ಕವನಗಳನ್ನು https://chat.whatsapp.com/FxVe0AxxmQtFispqP7T3PO ಗ್ರೂಪ್-1
ಈ ಕೊಂಡಿ ಬಳಸಿ ಕೈವಾರ ತಾತಯ್ಯ ಕವನ ಸ್ಪರ್ಧೆಯ 👆🏾 ಒಂದನೇ ವಾಟ್ಸಪ್ ಗುಂಪು
ಅಥವಾ https://chat.whatsapp.com/FaIauwGmKEhCvsj7k6o2zG ಗ್ರೂಪ್ -2
👆🏾ಈ ಕೊಂಡಿ ಬಳಸಿ ಎರಡನೇ ಗುಂಪು ಸೇರಿ ಯಾವುದಾದರೂ ಒಂದು ಗುಂಪಿಗೆ ಮಾತ್ರ, ಸ್ಪರ್ಧೆ ದಿನ ಒಂದು ಕವನ ಮಾತ್ರ ಹಾಕಬೇಕು.
ಜೊತೆಗೆ ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಪ್ರತ್ಯೇಕ ಪಡಿಸಿದ ನಿಮ್ಮ ಫೋಟೋ ಹಾಕಬೇಕು.
👉 ಎಲ್ಲ ವಿಜೇತರಿಗೆ 'ಕಾಲಜ್ಞಾನಿ ಯೋಗಿ ನಾರೇಯಣ ಪ್ರಶಸ್ತಿ'-ಯನ್ನು ನೀಡಿ ಪುರಸ್ಕರಿಸಲಾಗುವುದು .
👑 ನಗದುಬಹುಮಾನ
ಪ್ರಥಮ :5000/-
ದ್ವಿತೀಯ-3000/-
ತೃತೀಯ -2000/-
📜 ಮೆಚ್ಚುಗೆ ಪ್ರಶಸ್ತಿ ಪತ್ರಗಳ ಬಹುಮಾನ : 101( ನೂರೊಂದು )
👉 ಕೃತಿಚೌರ್ಯದ ಬಗ್ಗೆ ಆಯಾ ಲೇಖಕರೇ ಸಂಪೂರ್ಣ ಜವಾಬ್ಧಾರಿಯಾಗಿರುತ್ತಾರೆ.
👉 ಸ್ಪರ್ಧೆಗೆ ಬರುವ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಇದರ ಬಗ್ಗೆ ಪ್ರತ್ಯೇಕ ಅನುಮತಿ ಕೋರುವುದಿಲ್ಲ. .
👉 ಇವೆಲ್ಲ ಕಾರ್ಯಕ್ರಮಗಳು ಆನ್ಲೈನ್ ಮುಖಾಂತರವೇ ನಡೆಯುತ್ತವೆ.
👉 ಸ್ಪರ್ಧೆಯ ತೀರ್ಪುಗಾರರ ಹಾಗೂ ಸಂಪಾದಕ ಮಂಡಳಿಯು ನಾಡಿನ ಹಿರಿಯ ಸಾಹಿತಿಗಳನ್ನೊಳಗೊಂಡಿದ್ದು ಸ್ಪರ್ಧೆ ಮುಗಿಯುವವರೆಗೂ ಗೌಪ್ಯತೆ ಕಾಯ್ದುಕೊಳ್ಳಲಾಗುವುದು.
👉 ಬಹುಮಾನ ವಿತರಣೆ ಸಮಾರಂಭದ ದಿನಾಂಕ ಮತ್ತಿತರರ ವಿವರಗಳನ್ನು ನಂತರ ಪ್ರಕಟಿಸಲಾಗುವುದು.
👉 ನಿರ್ಣಾಯಕ ಬಳಗದ ತೀರ್ಮಾನವೇ ಅಂತಿಮವಾಗಿರುತ್ತದೆ.
ಸಂಪರ್ಕ ಸಂಖ್ಯೆ: 9972571560
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.