ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

Date: 20-11-2023

Location: ಅಂಕೋಲಾ


ಅಂಕೋಲಾ: ಪಿ.ಎಂ.ಸಂಯುಕ್ತ ಪ.ಪೂ ಕಾಲೇಜು ಮತ್ತು ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದಿಂದ ಕವಿ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವು 2023 ನವೆಂಬರ್‌ 20 ಸೋಮವಾರದಂದು ಪಿ.ಎಂ.ಸಂಯುಕ್ತ ಪ.ಪೂ ಕಾಲೇಜಿನಲ್ಲಿ ನೆರವೇರಿತು.

ಸಾಹಿತಿ ಜಯಂತ ಕಾಯ್ಕಿಣಿಯವರು ಕೃತಿ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಯಾಗಿ ವಿಶ್ರಾಂತ ಪ್ರಾಚಾರ್ಯ ಶಿವಾನಂದ ನಾಯಕ ಕವಿಗಳಾದ ಡಾ.ಸಿದ್ಧಲಿಂಗ ಸ್ವಾಮಿ ವಸ್ತೃದ್ ಉಪಸ್ಥಿತರಿದ್ದರು.

ಹೊನ್ನಾವರದ ನಾಗರಾಜ್ ಹೆಗಡೆ ಅಪಗಾಲ್ ಪುಸ್ತಕದ ಕುರಿತು ಮಾತನಾಡಿದರು. ದಿನಕರ ಪ್ರತಿಷ್ಠಾನದ ಮೋಹನ್ ಹಬ್ಬು ಅವರು ಅಧ್ಯಕ್ಷತೆ ವಹಿಸಿದ್ದು , ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದ್ದರು.

MORE NEWS

ವೀರಲೋಕದಿಂದ ಉತ್ತರ ಕರ್ನಾಟಕ ಮಂದಿಗೆ ‘ಉತ್ತರ ಪರ್ವ - ಉತ್ತರ ಕರ್ನಾಟಕ ಸಾಹಿತ್ಯ ಸುಗ್ಗಿ’

28-11-2023 ಬೆಂಗಳೂರು

ಬೆಂಗಳೂರು: ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಅವರ ಪರಿಕಲ್ಪನೆಯ ಡಾ. ರಾಜಶೇಖಕರ ಮಠಪತಿ (ರಾಗಂ) ಅವರ ಸಹಭಾಗಿತ್ವ...

ಎಂ.ಎಸ್. ಆಶಾದೇವಿ, ಇಂದಿರಾ ಹೆಗ್ಗಡೆ ಅವರಿಗೆ ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ

27-11-2023 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ ಪ್ರಕಟವಾಗಿದ್ದು, 2022ನೇ ಸಾಲಿಗೆ ಸಂಶ...

ಸಂವಿಧಾನ ದಿನಾಚರಣೆಯ ಅಂಗವಾಗಿ ‘ವಿಶ್ವಜ್ಞಾನಿ ಅಂಬೇಡ್ಕರ್’ ನಾಟಕ ಪ್ರದರ್ಶನ

26-11-2023 ಬೆಂಗಳೂರು

ಸಂವಿಧಾನ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಇಎಲ್ ಪರಿಶಿಷ್ಟಜಾತಿ/ವರ್ಗ ಕ್ಷೇಮಾಭಿವೃದ್ಧಿಸಂಘ ಆಯೋಜಿಸಿದ್ದ ಸಂವಿಧಾನ ದಿನಾಚರ...