Date: 14-10-2019
Location: ಬೆಂಗಳೂರು
2019 ರ ಕಹಳೆ ಕವಿತೆ ಪ್ರಶಸ್ತಿಗಾಗಿ ಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.
ನಾಡಿನ ಪ್ರಖ್ಯಾತ ಬರಹಗಾರರು ಕವಿತೆಗಳನ್ನು ಆಯ್ಕೆ ಮಾಡಿ ಕಹಳೆ ಕವಿತೆ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ಸಾವಿರ ರೂ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು. ಎರಡನೇ ಬಹುಮಾನ ಗಳಿಸಿದ ಕವಿತೆಗೆ ಪ್ರಶಸ್ತಿ ಪತ್ರ ಜೊತೆಗೆ ಪುಸ್ತಕಗಳನ್ನು ನೀಡಲಾಗುವುದು.
ಕವಿತೆಗಳನ್ನು ನುಡಿ ಇಲ್ಲವೇ ಯೂನಿಕೋಡ್ನಲ್ಲಿ ಟೈಪ್ ಮಾಡಿ kahaleblog@gmail.com ಗೆ ಇಮೇಲ್ ಮೂಲಕ ಕಳುಹಿಸಿಕೊಡಬೇಕೆಂದು ಸಂಸ್ಥೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಈ ಮೇಲ್ ಅನ್ನು ಕಳುಹಿಸುವ ವಿಧಾನವನ್ನು ತಿಳಿಸಿದ್ದು, ಈ ಮೇಲ್ನಲ್ಲಿ 'ಕಹಳೆ ಕವಿತೆ ಸ್ಪರ್ಧೆ 2019' ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದಿದ್ದಾರೆ.
ಕವಿತೆಗಳನ್ನು ಕಳುಹಿಸಲು ಕೊನೆಯ ದಿನ 30 ಅಕ್ಟೋಬರ್ 2019.
ಹೆಚ್ಚಿನ ಮಾಹಿತಿಗಾಗಿ: www.kahale.org https://www.facebook.com/Kahale.org/
ಕವಿತೆ ಕಳಿಸಲು ಪ್ರಮುಖ ನಿಯಮಗಳು:
ಈ ಸ್ಪರ್ಧೆಗೆ ಕಳುಹಿಸುವ ಕವಿತೆಗಳು ಸ್ವಂತ ರಚನೆಯಾಗಿರಬೇಕು.
ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ,ಬ್ಲಾಗ್, ಜಾಲತಾಣ, ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಹೀಗೆ ಎಲ್ಲಿಯೂ ಕೂಡ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಒಬ್ಬರು ಗರಿಷ್ಠ ಎರಡು ಕವಿತೆಗಳನ್ನು ಕಳುಹಿಸಬಹುದು.
ಕವಿತೆ 40 ಸಾಲುಗಳನ್ನು ಮೀರಿರಬಾರದು.
ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...
ಬೆಂಗಳೂರು: ಸಾವಣ್ಣ ಪ್ರಕಾಶನದ 200ನೇ ಕೃತಿ, ಲೇಖಕ ಜೋಗಿ ಅವರ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಬಿಡುಗಡೆ ಕಾ...
ಬೆಂಗಳೂರು: ನನ್ನ ಕಲಾರಂಗದ ಬೆಳವಣಿಗೆಗೆ ಇದೇ ವೇದಿಕೆ ಕಾರಣ. ಈ ವೇದಿಕೆ ನನ್ನನ್ನ ಸಾಕಿದೆ, ಬೆಳೆಸಿದೆ, ನನಗೆ ತಿಳುವಳಿಕೆ...
©2024 Book Brahma Private Limited.