Date: 23-09-2021
Location: ಧಾರವಾಡ
ಲೇಖಕಿ ಹೆಚ್. ಜಿ. ರಾಧಾದೇವಿ ವ್ಯಕ್ತಿತ್ವ ಬರಹ ಅಭಿಮಾನಿ ಬಳಗವು ರಾಧಾದೇವಿ ಅವರ ಕಾದಂಬರಿಯ ಕುರಿತು ಇತ್ತೀಚೆಗೆ ಹಮ್ಮಿಕೊಂಡಿದ್ದ ’ಸೆಪ್ಟೆಂಬರ್ 2021’ರ ಸ್ಫರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿವರ ಇಂತಿದೆ;
ಸ್ಪರ್ಧೆಯ ಎರಡು ವಿಭಾಗಗಳ ಪೈಕಿ 1. ಪುಸ್ತಕ ಬಹುಮಾನ ಸ್ಪರ್ಧೆಯಲ್ಲಿ ಲೇಖಕಿಯರಾದ ವೈಶಾಲಿ ನರಹರಿ ರಾವ್ ಹಾಗೂ ಎಸ್.ಪಿ ರೋಹಿಣಿ ಹಾಗೂ 2ನೇ ವಿಭಾಗ ನಗದು ರೂಪದ ಬಹುಮಾನ ವಿಭಾಗದಲ್ಲಿ ಸುಜಾತಾ ರವೀಶ್ ಹಾಗೂ ಪ್ರಸನ್ನಾ ಚಕ್ಕೆಮನೆ ಅವರು ಸ್ಪರ್ಧಾ ವಿಜೇತರಾಗಿದ್ದಾರೆ.
‘ರಾಧಾದೇವಿ ಅವರ ಕಾದಂಬರಿಗಳಲ್ಲಿ ನನಗೆ ಮೆಚ್ಚುಗೆಯಾದ ಅಂಶಗಳು’ ಸ್ಪರ್ಧೆಯ ವಿಷಯವಾಗಿತ್ತು. ಸಂಘವು ಪುಸ್ತಕ ಬಹುಮಾನ ನೀಡುತ್ತಿದ್ದರೆ, ನಗದು ಬಹುಮಾನವನ್ನು ವೀಣಾ ನಾಯಕ್ ಪ್ರಾಯೋಜಿಸಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.