ರೈತರ ಮೇಲಿನ ಶೋಷಣೆಯ ಕುರಿತು ಬೆಳಕು ಚೆಲ್ಲಿದ ಕೃತಿ ‘ಜರ್ಮನ್ ರೈತ ಯುದ್ಧ’ - ಜಿ.ಎನ್. ನಾಗರಾಜ್

Date: 22-09-2022

Location: ಬೆಂಗಳೂರು


ರೈತರ ಮೇಲಿನ ಶೋಷಣೆಯನ್ನು "ಜರ್ಮನ್ ರೈತ ಯುದ್ಧ" ಕೃತಿಯಲ್ಲಿ ಬಹಳ ವಿಸ್ತಾರವಾಗಿ ವಿವರಿಸಲಾಗಿದ್ದು ಬಂಡವಾಳ ಶಾಹಿಗಳಿಗೂ ಇದರ ಪರಿಣಾಮ ಹೇಗೆ ಬೀರಿದೆ ಎಂಬುದನ್ನು ತಿಳಿಸಲಾಗಿದೆ ಎಂದು ಜಿ.ಎನ್.ನಾಗರಾಜ್ ಹೇಳಿದರು.

ಅವರು ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ವತಿಯಿಂದ ನಡೆದ ಫ್ರೆಡರಿಕ್ ಎಂಗೆಲ್ಸ್ ರಚಿಸಿರುವ, ನಾ ದಿವಾಕರ್ ಕನ್ನಡಕ್ಕೆ ಅನುವಾದಿಸಿರುವ "ಜರ್ಮನ್ ರೈತ ಯುದ್ಧ" ಕೃತಿಯನ್ನು ಬೆಂಗಳೂರಿನ ಪುಸ್ತಕ ಪ್ರೀತಿ ಮಳಿಗೆಯಲ್ಲಿ ಬಿಡುಗಡೆ ಮಾಡಿ ಮಾತಾನಾಡಿದರು.

ಜರ್ಮನ್‌ ರೈತ ಯುದ್ಧ ಪುಸ್ತಕಗಳಿಂದ ಸಾಕಷ್ಟು ವಿಚಾರಗಳನ್ನು ನಾವು ಕಲಿಯಬಹುದಾಗಿದೆ. ರೈತ ಚಳುವಳಿಯ ಪ್ರಭಾವ ಹಾಗೂ ಅಗಾಧತೆಯನ್ನು ಈ ಕೃತಿಯಿಂದ ತಿಳಿಯಲು ಸಾಧ್ಯ. ರೈತ ಚಳುವಳಿಯನ್ನು ಯಶಸ್ವಿಗೊಳಿಸುವಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂಬುದು ಈ ಕೃತಿಯನ್ನ ಓದಿದ ನಂತರ ತಿಳಿಯಿತು ಎಂಬುದಾಗಿ ನುಡಿದರು.

ಆನ್ ಲೈನ್ ಮೂಲಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿದರು. ಪಿ.ವಿ.ಲೋಕೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕ್ರಿಯಾ ಮಾಧ್ಯಮದ ವಸಂತ್ ರಾಜ್ ಪ್ರಾಸ್ತಾವಿಕ ಮಾತನಾಡಿದರು. ನವಕರ್ನಾಟಕದ ಸಿದ್ದನಗೌಡ ಪಾಟೀಲ ವಂದಿಸಿದರು.


MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...