Date: 21-10-2020
Location: ಬೆಂಗಳೂರು
ಶ್ರೀರುದ್ರಗೌಡ ಪಾಟೀಲ್ ಸಿಂಧನೂರು ಇವರ ಪುಣ್ಯಸ್ಮರಣಾರ್ಥವಾಗಿ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರುದ್ರಗೌಡ ಪಾಟೀಲ್ ಪ್ರತಿಷ್ಠಾನ(ರಿ)ಸಿಂಧನೂರು ಹಾಗೂ ಆಕ್ಸ್ ಫರ್ಡ್ ಫೌಂಡೇಷನ್ ಸಿಂಧನೂರು ಇವರ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಈ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 15.000, ದ್ವಿತೀಯ ಬಹುಮಾನ 10.000, ತೃತೀಯ ಬಹುಮಾನ - 5000 ಹಾಗೂ ಮೆಚ್ಚುಗೆ ಪಡೆದ ಐದು ಕಥೆಗಳಿಗೆ 2.500ರೂಗಳನ್ನು ನಿಗಧಿ ಪಡಿಸಲಾಗಿದೆ. ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ- 30-11-2020.
ಸ್ಪರ್ಧೆಯ ನಿಯಮಗಳು:
ಕರ್ನಾಟಕ ರಾಜ್ಯದ ಕಥೆಗಾರರಿಗೆ ಮುಕ್ತ ಅಪಕಾಶ, ವಯಸ್ಸಿನ ನಿರ್ಬಂಧತೆ ಇರುವುದಿಲ್ಲ.
ಕಥಾ ಸ್ಪರ್ಧೆಗೆ ಒಬ್ಬರಿಂದ ಒಂದು ಕಥೆಗೆ ಮಾತ್ರ ಅವಕಾಶ
ಕಥಾ ಸ್ಪರ್ಧಾರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ
ಕಥೆಯು ಈ ಹಿಂದೆ ಪ್ರಶಸ್ತಿ ಹಾಗೂ ಪ್ರಕಟನೆಗೆ ಆಯ್ಕೆಗೊಂಡಿರಬಾರದು
ಕಥೆಯು ಕೃತಿಚೌರ್ಯಗೊಂಡಿರದೆ, ಸ್ವಂತದ್ದಾಗಿರಬೇಕು ಮತ್ತು ಭಾಷಾಂತರ, ರೂಪಾಂತರಗೊಂಡಿರಬಾರದು
ತೀರ್ಪುಗಾರರಿಗೆ ಮೆಚ್ಚುಗೆಯಾದ ಆಯ್ದ 25 ಕಥೆಗಳನ್ನು ಮಾತ್ರ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು
ಸ್ಪರ್ಧೆಗೆ ಕಳುಹಿಸುವ ಕಥೆಯು 3000 ಪದಗಳ ಮಿತಿಯೊಳಗಿರಬೇಕು
ಸ್ಪರ್ಧಾರ್ಥಿಗಳು ತಮ್ಮ ಸಂಪೂರ್ಣ ವಿಳಾಸ ಹಾಗೂ ಎರಡು ಭಾವ ಚಿತ್ರಗಳನ್ನು ಕಥೆಯೊಂದಿಗೆ ಪ್ರತ್ಯೇಕ ಪುಟದಲ್ಲಿ ಕಳುಹಿಸುವುದು.
ಕಥೆಯು ಕಾಗದದ ಒಂದೇ ಮಗ್ಗುಲಲ್ಲಿ ಮುದ್ರಣಗೊಂಡಿರಬೇಕು. ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ವ್ಯವಸ್ಥೆ ಇರುವುದಿಲ್ಲ
ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ರುದ್ರಗೌಡ ಪ್ರತಿಷ್ಠಾನದ್ದು
ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲೂ ವ್ಯವಸ್ಥಾಪಕದ್ದೇ ಅಂತಿಮ ತೀರ್ಮಾನವಾಗಿರುತ್ತದೆ.
ಕಥೆಗಾರರು ಸ್ಪರ್ಧೆಗೆ ಕಳುಹಿಸುವ ಕಥೆಗಳನ್ನು ನುಡಿ, ಬರಹ ಅಥವಾ ಯುನಿಕೋಡ್ ನ ಎಂ.ಎಸ್-ವರ್ಡ್ ತಂತ್ರಾಂಶದಲ್ಲಿ (ಸಾಫ್ಟ್ ಕಾಪಿ) (ಇ-ಮೇಲ್- principaloxford515@gmail.com, kvvdevendrahufa@gmail.com ಗೆ ಕಳಿಸುವುದು.
ಕಥೆಯನ್ನು ಕಳುಹಿಸುವ ಕೊನೆಯ ದಿನಾಂಕ- 30-11-2020
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...
©2024 Book Brahma Private Limited.