Date: 22-02-2020
Location: ಸುಚಿತ್ರ ಫಿಲ್ಮಂ ಸೊಸೈಟಿ
ಕನ್ನಡ ಪುಸ್ತಕ ಲೋಕದಲ್ಲಿ ವರ್ಷಕ್ಕೆ ಅಂದಾಜು ಏಳು ಸಾವಿರ ಪುಸ್ತಕ ಬಿಡುಗಡೆಯಾಗುತ್ತಿದ್ದರೂ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಅಂತರ್ಜಾಲದತ್ತ ಮುಖ ಮಾಡುತ್ತಿರುವುದು ಆದ್ದರಿಂದ ಡಿಜಿಟಲ್ ಮೂಲಕ ಕನ್ನಡ ಸಾಹಿತ್ಯವನ್ನು ಓದುಗರಿಗೆ ತಲುಪಿಸುವ ಕೆಲಸವನ್ನು ಬುಕ್ ಬ್ರಹ್ಮ - ಅಂತರ್ಜಾಲ ತಾಣ ಮಾಡುತ್ತಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಆಗುವ ಗಹನ ಚರ್ಚೆ, ಸಂವಾದ ವಿದ್ಯಮಾನಗಳನ್ನು‘ ಬುಕ್ ಬ್ರಹ್ಮ’ ದಾಖಲಿಸುವ ಮೂಲಕ ಕನ್ನಡ ಸಾಹಿತ್ಯ ಸೇವೆಯಲ್ಲಿ ಸಮರ್ಪಿಸಿಕೊಂಡಿದೆ.
ಓದುಗ-ಲೇಖಕ-ಪ್ರಕಾಶಕ-ವಿಮರ್ಶಕರನ್ನು ಒಂದೆಡೆ ಸೇರಿಸುವ ಅಂತರ್ಜಾಲ ತಾಣ ‘ಬುಕ್ ಬ್ರಹ್ಮ’ ಎಂದು ಫರ್ಬಿಂಡೆನ್ ಸಂಸ್ಥೆಯ ಮುಖ್ಯಸ್ತ ಸತೀಶ್ ಚಪ್ಪರಿಕೆ ಅವರು ಲೇಖಕ ‘ಜೋಗಿ’ಯೊಂದಿಗೆ ಶನಿವಾರ ಸುಚಿತ್ರ ಫಿಲ್ಮಂ ಸೊಸೈಟಿಯಲ್ಲಿ ಆಯೋಜಿಸಿದ ಅವಲೋಕನ ಕಾರ್ಯಕ್ರಮದಲ್ಲಿ ‘ಬುಕ್ ಬ್ರಹ್ಮ’ ಕಾರ್ಯವೈಖರಿಯನ್ನು ಪರಿಚಯಿಸಿದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.