Date: 21-10-2019
Location: ಬೆಂಗಳೂರು
ಸಂಗಾತ ಕಥಾ ಸ್ಪರ್ಧೆಯಲ್ಲಿ ದಾದಾಪೀರ್ ಜೈಮನ್ರ 'ಜಾಲಗಾರ'ಕ್ಕೆ ಮೊದಲ ಬಹುಮಾನ ಸಂದಿದೆ.
'ಸಂಗಾತ' ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಯುವ ಕಥಾ ಸ್ಪರ್ಧೆಯಲ್ಲಿ ದಾದಾಪೀರ್ ಜೈಮನ್ ಅವರ ಕಥೆ “ಜಾಲಗಾರ” ಕಥೆ ಬಹುಮಾನ ಪಡೆದಿದೆ. ದ್ವಿತೀಯ ಒಪ್ಪಿತ ಕಥೆಗಳಾಗಿ ಅಮರೇಶ ಗಿಣಿವಾರ ಅವರ 'ಹಿಂಡೆಕುಳು' ಮತ್ತು ಸಂಗನ ಗೌಡ ಹಿರೇಗೌಡ ಅವರ 'ಗಾಯದ ಬೆನ್ನು’ ಕಥೆಗಳು ಆಯ್ಕೆಯಾಗಿದೆ. ಬಹುಮಾನಿತ ಕಥೆಗೆ 10000ರೂ., ಒಪ್ಪಿತ ಎರಡೂ ಕಥೆಗಳಿಗೆ ತಲಾ 5,000 ರೂ. ನಗದು ಬಹುಮಾನವಿದೆ. ಕತೆಗಳು ಸಂಗಾತದ ನವೆಂಬರ್ ಸಂಚಿಯಲ್ಲಿ ಪ್ರಕಟಗೊಳ್ಳಲಿವೆ. ಹಿರಿಯ ಬರಹಗಾರರಾದ ಕೇಶವ ಮಳಗಿ ಹಾಗೂ ವಿನಯ ಒಕ್ಕುಂದ ಅವರು ತೀರ್ಪುಗಾರರಾಗಿದ್ದರು. 2020ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಸಂಗಾತ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಗಾತ ಪತ್ರಿಕೆಯ ಸಂಪಾದಕ ಟಿ. ಎಸ್. ಗೊರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.