"ಜಾಗತಿಕವಾಗಿ ನಾವು ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಮಾನಸಿಕವಾಗಿ ನಾವು ಮಹಿಳಾ ದೌರ್ಜನ್ಯ ಅದರಲ್ಲೂ ಮುಖ್ಯವಾಗಿ ಕೌಟುಂಬಿಕ ದೌರ್ಜನ್ಯಗಳ ಪ್ರಕರಣಗಳಿಂದಾಗಿ ಅಧಃಪತನದ ಹಾದಿಯಲ್ಲಿದ್ದೇವೆ," ಎನ್ನುತ್ತಾರೆ ಅಮ್ಮಸಂದ್ರ ಸುರೇಶ್. ಅವರು ತಮ್ಮ ‘ಅಗ್ನಿಕುಂಡದಿಂದ ಬಂದ ಚೇತನ’ ಕಾದಂಬರಿಗೆ ಬರೆದ ಲೇಖಕನ ನುಡಿ.
ನಾಗರಿಕತೆಯೊಂದಿಗೆ ಆರಂಭವಾದ ಮಹಿಳೆಯರ ಮೇಲಿನ ದೌರ್ಜನ್ಯ ಇಪ್ಪತ್ತೊಂದನೆಯ ಶತಮಾನದಲ್ಲಿ ಹೊಸ ಹೊಸ ರೂಪಾಂತರವನ್ನು ಪಡೆದುಕೊಂಡಿದೆ. ಇತಿಹಾಸದುದ್ದಕ್ಕೂ ಮಹಿಳೆ ಪುರುಷನಿಗೆ ಸಮನಾಗಿ ನಿಲ್ಲಬಲ್ಲಳೇ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಹೆಣ್ಣನ್ನು ಹೀನಾಯವಾಗಿ ನಡೆಸಿಕೊಳ್ಳುವ ಬರ್ಬರವಾದ ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಸಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸುವ ಘಟನೆಗಳು ನಿರಂತರವಾಗಿ ರೂಪಾಂತರ ಪಡೆದು ನಡೆದುಕೊಂಡು ಬಂದಿವೆ.
ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿ, ವೈದವ್ಯ, ಗೃಹ ಸಂಹಿತೆ, ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇಷ್ಟೊಂದು ನೋವುಗಳನ್ನು ಕಟ್ಟಿಕೊಂಡ ಹೆಣ್ಣಿನ ಕುರಿತು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ನೆನಪಾಗುತ್ತವೆ. “ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ದುಃಖಿತರು ಮತ್ತು ನೋವುಂಡವರು ಎಂದರೆ ಈ ನೆಲದ ಅಸ್ಪೃಶ್ಯರು ಮತ್ತು ಮಹಿಳೆಯರು ಡಾ.ಬಿ.ಆರ್.ಅಂಬೇಡ್ಕರ್ ಮಹಿಳೆಯನ್ನು ಜಾತಿ ಅಥವಾ ಧರ್ಮದ ಆಧಾರದ ಮೇಲೆ ವಿಂಗಡಿಸಿ ಮಾತನಾಡಲಿಲ್ಲ ಅಥವಾ ಬರೆಯಲಿಲ್ಲ. ತಮ್ಮ ಮನೆಯ ಒಂದು ಹೆಣ್ಣು ಅನುಭವಿಸಿದ ವೇದನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ.
ಜಾಗತಿಕವಾಗಿ ನಾವು ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಮಾನಸಿಕವಾಗಿ ನಾವು ಮಹಿಳಾ ದೌರ್ಜನ್ಯ ಅದರಲ್ಲೂ ಮುಖ್ಯವಾಗಿ ಕೌಟುಂಬಿಕ ದೌರ್ಜನ್ಯಗಳ ಪ್ರಕರಣಗಳಿಂದಾಗಿ ಅಧಃಪತನದ ಹಾದಿಯಲ್ಲಿದ್ದೇವೆ. ವರ್ತಮಾನದ ಭಾರತದ ಮಹಿಳೆ ತನ್ನನ್ನು ಆಧುನಿಕ ನಾಗರಿಕ ಭಾರತದ ಒಂದು ಭಾಗ ಎಂದು ಹಲವಾರು ಕ್ಷೇತ್ರಗಳಲ್ಲಿ ಕಂಡುಕೊಂಡಿದ್ದಾಳೆ. ಆದರೆ ಮನೆಯೆಂಬ ನಾಲ್ಕು ಗೋಡೆಗಳ ಒಳಗೆ ಹಿಂಸೆ ಮತ್ತು ನರಕಗಳ ಮಧ್ಯೆ ಬದುಕುವ ಹೆಣ್ಣಿನ ವೇದನೆಯನ್ನು ಅರ್ಥಮಾಡಿಕೊಳ್ಳುವ, ಗಂಡೆಂಬ ಹೆಣ್ಣು ಮನಃಸ್ಥಿತಿಯ ಗೆಳೆಯ, ಅಣ್ಣ, ತಮ್ಮ ಹಾಗೂ ಅಪ್ಪನ ಸ್ಥಾನ ತುಂಬುವ ಗಂಡಸು ಇನ ಹೆಚ್ಚಿನ ಮಹಿಳೆಯರ ಪಾಲಿಗೆ ಕನಸಿನ ಮಾತಾಗಿಯೇ ಉಳಿದಿದೆ. ಜಾಗತಿಕವಾಗಿ ಸುಮಾರು ಮೂವರು ಮಹಿಳೆಯರಲ್ಲಿ ಒಬ್ಬರು ತಮ್ಮ ಅನುಭವಿಸುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊಲೆ, ಅತ್ಯಾಚಾರ ಜೀವಿತಾವಧಿಯಲ್ಲಿ ದೈಹಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಮತ್ತು ಲೈಂಗಿಕ ದೌರ್ಜನ್ಯ, ದೈಹಿಕ ಹಲ್ಲೆ, ಭಾವನಾತ್ಮಕ ನಿಂದನೆ, ಹಿಂಬಾಲಿಸುವುದು, ವೇಶ್ಯಾವಾಟಿಕೆ, ಜನನಾಂಗ ಊನಗೊಳಿಸುವಿಕೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆ ಸೇರಿದಂತೆ ವ್ಯಾಪಕ ಶ್ರೇಣಿಯ ಕೃತ್ಯಗಳನ್ನು ವಿವರಿಸಲು ಮಹಿಳೆಯರ ಮೇಲಿನ ದೌರ್ಜನ್ಯ ಎಂಬ ಪದವನ್ನ ಬಳಸಲಾಗುತ್ತದೆ.
ವರದಕ್ಷಿಣೆ ಸಾವುಗಳು, ಲೈಂಗಿಕ ಕಿರುಕುಳ, ಚಿತ್ರಹಿಂಸೆ, ಅತ್ಯಾಚಾರ ಮತ್ತು ಕೌಟುಂಬಿಕ ಹಿಂಸೆಯ ಸ್ವರೂಪಗಳಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಗಮನಾರ್ಹವಾಗಿ ಹೆಚ್ಚುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ವರದಿ ತೋರಿಸುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯವು ಮನೆಯ ಆರ್ಥಿಕತೆಯ ಮೇಲೆ ಮತ್ತು ರಾಷ್ಟ್ರದ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಿಂಸಾಚಾರವು ಮಹಿಳೆಯರು ಮುಕ್ತವಾಗಿ ವರ್ತಿಸುವ ಅಥವಾ ಚಲಿಸುವ ಸಾಮರ್ಥ್ಯವನ್ನು ನಿರ್ಬಂಧಿಸುವ ಮೂಲಕ ಅಭಿವೃದ್ಧಿಯ ಪ್ರಯೋಜನಗಳನ್ನು ಅನುಭವಿಸುವುದನ್ನು ಅಥವಾ ಪ್ರವೇಶಿಸುವುದನ್ನು ತಡೆಯುತ್ತದೆ. ಜಾಗತಿಕವಾಗಿ ಶೇ. 38ರಷ್ಟು ಮಹಿಳೆಯರ ಕೊಲೆಗಳು ತಮ್ಮ ಗಂಡಂದಿರಿಂದ ಸಂಭವಿಸುತ್ತಿವೆ.
ಕೌಟುಂಬಿಕ ಕಲಹಗಳು, ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ಅಸಮರ್ಥತೆ ಮತ್ತು ಮದುವೆಯ ಪ್ರಸ್ತಾಪಗಳನ್ನು ತಿರಸ್ಕರಿಸುವುದು ಮುಂತಾದ ಕಾರಣಗಳಿಗಾಗಿ ಮಹಿಳೆಯರು ಮತ್ತು ಹುಡುಗಿಯರನ್ನು ವಿರೂಪಗೊಳಿಸಲು ಮತ್ತು ಕೆಲವೊಮ್ಮೆ ಕೊಲ್ಲಲು ಆಸಿಡ್ ದಾಳಿಗಳು ಅಗ್ಗದ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಅಸ್ತವಾಗಿ ಹೊರಹೊಮ್ಮಿವೆ.
ಆಸಿಡ್ ದಾಳಿಯಲ್ಲಿ ಬದುಕುಳಿದವರು ಜೀವನದಲ್ಲಿ ಹಲವು ಅಡೆ ತಡೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಜೀವನ ನಡೆಸಬೇಕಾಗಬಹುದು. ಕೆಲವರು ಆತ್ಮಹತ್ಯೆಯ ದಾರಿಯನ್ನೂ ಹಿಡಿಯುತ್ತಾರೆ. ಆದರೆ ಕೆಲವೇ ಕೆಲವು ಮಹಿಳೆಯರು ಫೀನಿಕ್ಸ್ನಂತೆ ಮೇಲೇಳುತ್ತಾರೆ. ಸತ್ಯ ಕಥೆಯನ್ನು ಈ ಕಾದಂಬರಿ ತನ್ನ ಒಡಲಲ್ಲಿ ತುಂಬಿಕೊಂಡಿದೆ. ಅಂತಹವರಲ್ಲಿ ಈ ಕಾದಂಬರಿಯ ನಾಯಕಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರಸಿದ್ಧ ದಿ ವೀಕ್ ಇಂಗ್ಲಿಷ್ ನಿಯತಕಾಲಿಕೆ ತನ್ನ ಮೇ 20, 2012ರ ಸಂಚಿಕೆಯಲ್ಲಿ “ಕಳೆದು ಹೋದ ಪ್ರಪಂಚ” ಎಂಬ ಶೀರ್ಷಿಕೆಯಲ್ಲಿ ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ಕುರಿತು ಲೀಡ್ ಸ್ಟೋರಿಯನ್ನು ಪ್ರಕಟಿಸಿತು. ಇದರಲ್ಲಿ ಈ ಕಾದಂಬರಿಯ ನಾಯಕಿಯ ಕಥೆಯನ್ನೂ ಕೂಡ ಪ್ರಕಟಿಸಿದ್ದು ಗಮನಾರ್ಹ ಸಂಗತಿಯಾಗಿದೆ.
ಈ ಕಾದಂಬರಿಯ ಕಥೆ ನಿಜವಾಗಿಯೂ ಪ್ರತಿಯೊಬ್ಬರ ಮನಮಿಡಿಯುವ ಧಾರುಣ ಕಥೆಯಾದರೂ, ನಾಯಕಿ ನಂತರ ಸಾಧಿಸಿದ ಸಾಧನೆಗಳು ಎಲ್ಲ ಮಹಿಳೆಯರಿಗೂ ಮಾದರಿಯಾಗಿರುವ ಜೊತೆಗೆ ದಾರಿದೀಪ ಕೂಡ ಆಗಿದೆ. ಹಾಗಾಗಿ ಇದನ್ನು ಕಾದಂಬರಿ ರೂಪದಲ್ಲಿ ಬರೆಯುವ ನಿರ್ಧಾರ ಮಾಡಿದೆ. ಈ ಕಾದಂಬರಿಯಲ್ಲಿ ಬರುವ ನಾಯಕಿಯ ಕಥೆ ಬರೀ ಕಥೆಯಲ್ಲಿ ಬದಲಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಓದಲೇಬೇಕಾದ ಮಾನವೀಯ ಹಾಗೂ ಮಾರ್ಗದರ್ಶಿ ಬರಹವಾಗಿದೆ. ಈ ಕಾದಂಬರಿಯ ಬರವಣಿಗೆಯಲ್ಲಿ ಕಾದಂಬರಿಯ ನಾಯಕಿ ನೀಡಿದ ಸಹಕಾರಕ್ಕಾಗಿ ಅವರಿಗೆ ಕೃತಜ್ಞತೆಗಳು, ನೀವು ಉತ್ತಮವಾಗಿ ಬರೆಯುತ್ತೀರಿ, ಸೃಜನಶೀಲ ಸಾಹಿತ್ಯ ಪ್ರಕಾರದಲ್ಲಿ ಏನನ್ನಾದರು ಬರೆಯಿರಿ ಎಂದು ಭೇಟಿಯಾದಾಗಲೆಲ್ಲ ಹೇಳುತ್ತಿದ್ದ ವಿಜ್ಞಾನಿಗಳೂ ಹಾಗೂ ಕಾದಂಬರಿಕಾರರಾದ ಶ್ರೀ ಪ್ರಸನ್ನ ಸಂತೆಕಡೂರುರವರ ಪ್ರೋತ್ಸಾಹದಿಂದಾಗಿಯೇ ಈ ಕಾದಂಬರಿಯನ್ನು ನಾನು ಬರೆಯಲು ಸಾಧ್ಯವಾಯಿತು. ಅವರಿಗೆ ಧನ್ಯವಾದಗಳು. ಗೆಳೆಯ ತಿಮ್ಮೇಗೌಡನ ಪ್ರೀತಿಗೆ ಆಭಾರಿ.
ಕೃತಿಯನ್ನು ಪ್ರಕಟಿಸುತ್ತಿರುವ ಅದ್ರಿ ಪಬ್ಲಿಕೇಷನ್ಸ್ ಅವರಿಗೆ ಧನ್ಯವಾದಗಳು. ಪುಟ ವಿನ್ಯಾಸ ಮಾಡಿದ ಶ್ರೀ ಸೋಮಚಾರ್ ಮತ್ತು ಮುಖಪುಟ ರಚಿಸಿದ ಶ್ರೀಕಂಠರವರಿಗೆ ಧನ್ಯವಾದಗಳು. ಬಹಳ ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟ ಹಿರಿಯ ಸಾಹಿತಿಗಳಾದ ಶ್ರೀ ಸಿ. ನಾಗಣ್ಣನವರ ಪ್ರೀತಿಗೆ ಆಭಾರಿಯಾಗಿದ್ದೇನೆ.
ಸರ್ಕಾರವು ಆಸಿಡ್ ದಾಳಿಗೆ ತುತ್ತಾದ ಮಹಿಳೆಯರನ್ನು ಅಂಗವಿಕಲರು ಎಂದು ಪರಿಗಣಿಸಿ ಸರ್ಕಾರ ನೀಡುವ ವಿವಿಧ ಸೌಲಭ್ಯ-ಸವಲತ್ತು ಮುಂತಾದವುಗಳನ್ನು ಮೀಸಲಾತಿ ಪ್ರವರ್ಗದಲ್ಲಿ ಅವರಿಗೆ ಕೊಡಬೇಕು.
ಅರುಂಧತಿ ರಾಯ್, 1997ರ ಬೂಕರ್ ಪ್ರಶಸ್ತಿ ಸಮಾರಂಭದಲ್ಲಿ. 2006 ರಲ್ಲಿ ಪ್ರಶಸ್ತಿ ಪಡೆದ ಕಿರಣ್ ದೇಸಾಯ್. ...
ಲಂಡನ್: ದಕ್ಷಿಣ ಭಾರತ ಭಾಷಾ ಸಾಹಿತ್ಯ ಲೋಕದ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ಕನ್ನಡದ ಲೇಖಕಿಯೊಬ್ಬರು ಈ ಪ್ರತಿಷ್ಠಿತ...
"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...
©2025 Book Brahma Private Limited.