ತುಮಕೂರಿನ ‘ಸೃಜನವೇದಿಕೆ’ಯಿಂದ ಜಿಲ್ಲಾ ಮಟ್ಟದ ಕಾವ್ಯ ಸ್ಪರ್ಧೆ

Date: 03-10-2022

Location: ಬೆಂಗಳೂರು


ತುಮಕೂರಿನ ‘ಸೃಜನವೇದಿಕೆ’ ವತಿಯಿಂದ 2022ರ ಜಿಲ್ಲಾ ಮಟ್ಟದ ಕಾವ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಾವ್ಯ ಸ್ಪರ್ಧೆಗೆ ಕವಿಗಳ ಸ್ವರಚಿತ ಕವನಗಳನ್ನು ಮಾತ್ರ ಕಳುಹಿಸಲು ಅವಕಾಶವಿರುತ್ತದೆ.

ಸ್ಪರ್ಧೆಗೆ ಕವನಗಳನ್ನು ಕಳುಹಿಸಲು 2022 ಅಕ್ಟೋಬರ್ 30 ರಂದು ಕೊನೆಯ ದಿನಾಂಕವಾಗಿದ್ದು, ಕವನಗಳನ್ನು Susheela.sm@gmail.com ಇಮೇಲ್ ಐಡಿ ಅಥವಾ 7019843776 ವಾಟ್ಸ್ ಅಪ್ ನಂಬರ್ ಮೂಲಕ ಕಳುಹಿಸಬಹುದು. ಕವನದ ಜೊತೆಗೆ ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಹೆಸರು, ವಯಸ್ಸು , ಮೊಬೈಲ್ ನಂಬರ್, ಪೂರ್ಣ ವಿಳಾಸ ನಮೂದಿಸಿರಬೇಕು. ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ವಿದ್ಯಾರ್ಥಿಗಳೂ ಭಾಗವಹಿಸಬಹುದು. ಆಯ್ಕೆಯಾದ ಅತ್ಯುತ್ತಮ ಕವನಗಳಿಗೆ ಸೃಜನ ವೇದಿಕೆಯಿಂದ ನವೆಂಬರ್ ತಿಂಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ಆಯ್ಕೆಯಾದ ಉತ್ತಮ ಕವನಗಳನ್ನು ಅಂದಿನ ಕಾರ್ಯಕ್ರಮದಲ್ಲಿ ಓದುವ ಅವಕಾಶವಿರುತ್ತದೆ ಎಂದು ಸೃಜನವೇದಿಕೆಯ ಅಧ್ಯಕ್ಷರು ಸುಶೀಲಾ ಸದಾಶಿವಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

MORE NEWS

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

29-03-2024 ಬೆಂಗಳೂರು

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...