ವ್ಯಕ್ತಿಯ ಕುರಿತು ಪುಸ್ತಕ ಬಂದಲ್ಲಿ ಜೀವನದ ಸಾರ್ಥಕತೆ : ಕಿಚ್ಚ ಸುದೀಪ್

Date: 11-01-2021

Location: ಬೆಂಗಳೂರು


‘ಬಹುಜನರು 70ರ ವಸಂತ ಕಾಣುವುದೇ ಅಪರೂಪ, ಆದರೆ ಗಿರಿಜಾ ಅವರಿಗೆ ಇದರೊಂದಿಗೆ ಆಚರಣೆಯ ಸಂಭ್ರಮವು ಸಿಕ್ಕಿದೆ. ಒಬ್ಬರ ಜೀವನ ಸಾರ್ಥಕತೆ ಪಡೆಯುವುದು ಅವರ ಕುರಿತು ಪುಸ್ತಕ ಬಂದಾಗ. ಅದೀಗ ‘ಗಿರಿಜಾ ಪರಸಂಗದ’ ಮೂಲಕ ಜರುಗಿದ್ದು, ಗಿರಿಜಮ್ಮನವರ ಜೀವನವು ಇಂದು ಆ ಸಾರ್ಥಕತೆಯ ಮಟ್ಟವನ್ನು ತಲುಪಿದೆ’ ಎಂದು ನಟ ಕಿಚ್ಚ ಸುದೀಪ್ ಅವರು ‘ಗಿರಿಜಾ ಪರಸಂಗ’ ಬಿಡುಗಡೆ ಸಮಾರಂಭದಲ್ಲಿ ಶುಭ ನುಡಿದರು.

ಬೆಂಗಳೂರಿನ ಸುಚಿತ್ರ ಫಿಲ್ಮ ಸೊಸೈಟಿಯಲ್ಲಿ ಬುಕ್ ಬ್ರಹ್ಮ ಹಾಗೂ ಅಂಕಿತ ಪುಸ್ತಕ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಗಿರಿಜಾ ಲೋಕೇಶ್ ಅವರ ಆತ್ಮಕಥೆಯ ‘ಗಿರಿಜಾ ಪರಸಂಗ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಕೃತಿಯನ್ನು ಪತ್ರಕರ್ತ ಜೋಗಿ ನಿರೂಪಣೆ ಮಾಡಿರುವುದು ಮತ್ತೊಂದು ವಿಶೇಷ.

ನಂತರ ಮಾತನಾಡಿದ ಕವಿ ಎಚ್‌.ಎಸ್. ವೆಂಕಟೇಶ ಮೂರ್ತಿ, ‘ಕಲಾವಿದರ ಜೀವನ ಬೇರೆಯದ್ದೇ ಆಗಿರುತ್ತದೆ. ಅವರು ಸ್ಟಾರ್‌ಗಳ ಹಾಗೆ ಮಿಂಚಿ ಮರೆಯಾಗುವವರಲ್ಲದೆ ಸದಾ ಬೆಳಗುವ ‘ನಂದಾದೀಪ’. ಆ ಸಾಲಿಗೆ ಗಿರಿಜಾ ಲೋಕೇಶ್ ಅವರು ಹೊರತಲ್ಲ’ ಎಂದರು.

ಕಾರ್ಯಕ್ರಮದಲ್ಲಿ ನಟಿ ಜಯಮಾಲಾ, ಪುತ್ರ ಸೃಜನ್‌ ಲೋಕೇಶ್, ಸಂದೇಶ್ ನಾಗರಾಜ್, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ನಟ ಅಶೋಕ್ ಮುಂತಾದ ತಾರಾ ಬಳಗ ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...