Date: 12-01-2020
Location: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಚಾಮರಾಜಪೇಟೆ, ಬೆಂಗಳೂರು
ಡಬ್ಲ್ಯು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳ ಅನುವಾದವು ಸಾರ್ಥಕ ಮಾತ್ರವಲ್ಲ; ಮಾದರಿಯೂ ಹಾಗೂ ಅನುಕರಣೀಯವೂ ಆಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.
ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಉದಯ ಪ್ರಕಾಶನ ಹಾಗೂ ಪ್ರೊ.ವಿ. ಕೃಷ್ಣಮೂರ್ತಿರಾವ್ ಅಭಿಮಾನಿ ಬಳಗವು ಜಂಟಿಯಾಗಿ ಆಯೋಜಿಸಿದ್ದ ಪ್ರೊ. ವಿ.ಕೃಷ್ಣಮೂರ್ತಿ ರಾವ್ ಅವರು ಅನುವಾದಿಸಿರುವ ’ಡಬ್ಲ್ಯು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳು’ ಕೃತಿಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರೊ. ವಿ.ಕೃಷ್ಣಮೂರ್ತೀ ರಾವ್ ಅವರ ಓದು, ಅಧ್ಯಯನ, ವಿವೇಕ, ಅನುವಾದದ ರಮಣೀಯತೆ-ಈ ಸಂಕಲನದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತವೆ. ಇದೊಂದು ಸಾರ್ಥಕ ಹಾಗೂ ಅನುಕರಣೀಯ ಅನುವಾದ ಎಂದು ಪ್ರಶಂಸಿಸಿದರು.
ಖ್ಯಾತ ಅನುವಾದಕ ಪ್ರೊ. ಓ.ಎಲ್. ನಾಗಭೂಷಣ ಕೃತಿಯನ್ನು ಲೋಕಾರ್ಪಣೆ ಮಾಡಿ, ಡಬ್ಲ್ಯು.ಬಿ.ಯೇಟ್ಸ್ ಕವಿಯು ಆಧುನಿಕ ಇಂಗ್ಲಿಷ್ ಕಾವ್ಯ ಚರಿತ್ರೆಯಲ್ಲಿ ಪ್ರಸಿದ್ಧ ಕವಿ. ವಿದ್ವಾಂಸನೂ ಹೌದು. ಈತನ ಕವನಗಳು ಕಳೆದ ನೂರು ವರ್ಷದಿಂದ ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡವೂ ಸಹ ಕಳೆದ ಅರ್ಧ ಶತಮಾನಕ್ಕಿಂತ ಹೆಚ್ಚಾಗಿ ಈತನ ಕಾವ್ಯ ಭಾವಗಳನ್ನು ತನ್ನ ಸ್ವತ್ತಾಗಿ ಮಾಡಿಕೊಂಡಿದೆ ಎಂದರು.
ಅನುವಾದಕ ಜಯಪ್ರಕಾಶ ನಾರಾಯಣ (ಜೆ.ಪಿ) ಮಾತನಾಡಿ, ಪ್ರೊ. ವಿ.ಕೃಷ್ಣಮೂರ್ತಿ ರಾವ್ ಅವರು ಇಂಗ್ಲಿಷ್ ವಿದ್ಯಾರ್ಥಿ. ಇಂಗ್ಲಿಷ್ ಕಾವ್ಮದ ಮರ್ಮವನ್ನು ಚೆನ್ನಾಗಿ ಅರಿತವರು. ಅನುವಾದಕರು. ಈಗಾಗಲೇ ಐದು ಕನ್ನಡ ಕಾವ್ಯ ಸಂಕಲನಗಳನ್ನು ಪ್ರಕಟಿಸಿರುವ ಅವರು, ನಮ್ಮ ನಡುವಿನ ಮುಖ್ಯ ಕವಿಗಳಲ್ಲಿ ಒಬ್ಬರು. ಕಳೆದ 4 ವರ್ಷಗಳವರೆಗೆ ಯೇಟ್ಸ್ ಕವಿತೆಗಳನ್ನು ಧ್ಯಾನಿಸಿ, 70 ಕವಿತೆಗಳನ್ನು ಅನುವಾದಿಸಿದ್ದಾರೆ. ಕವನ ಸಂಕಲನದ ಚಾರಿತ್ಯ್ರಕ ನೆಲೆಗಳನ್ನು ತಿಳಿಸಲು ಪ್ರವೇಶಿಕೆಗಳನ್ನು ನೀಡಿದ್ದಾರೆ ಎಂದರು. ಬಿ.ಆರ್. ಪರಮೇಶ್, ಎಂ.ಡಿ.ಶೈಲಜಾ, ಸತ್ಯಮಂಗಲ ಮಹದೇವ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.