Date: 19-09-2021
Location: ಯಾದಗಿರಿ
ಯಾದಗಿರಿಯ ಸರಕಾರಿ ವಸತಿಗೃಹ ‘ವಿಂಧ್ಯಾದ್ರಿ’ ಯಲ್ಲಿ ಭಾನುವಾರ ಬೆಳಿಗ್ಗೆ ಸಾಹಿತಿ ಮುಕ್ಕಣ್ಣ ಕರಿಗಾರ ಅವರ 44ನೇ ಕೃತಿ ‘ಶಿವತತ್ವ ಚಿಂತನೆ’ ಲೋಕಾರ್ಪಣೆಗೊಂಡಿತು. ಈ ಕೃತಿಯು 25 ಶಿವಚಿಂತನೆಗಳನ್ನು ಒಳಗೊಂಡಿದೆ.
ಜಿ.ಪಂ. ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ಎರಡು ವರ್ಷದ ಪುತ್ರಿ ವಿಂಧ್ಯಾ ಮುಕ್ಕಣ್ಣ ಕರಿಗಾರ ಅವರು ಕೃತಿ ಬಿಡುಗಡೆಗೊಳಿಸಿದರು. ಯಾದಗಿರಿ ಜಿ.ಪಂ. ಎಡಿಪಿಸಿ ಬನ್ನಪ್ಪ, ಅಧೀಕ್ಷಕರಾದ ಈರಯ್ಯ,ಅಶೋಕ ಕಲಾಲ್, ಮಲ್ಲಿಕಾರ್ಜುನ ಮುಂಡ್ರಕೇರಿ, ಬಸವಲಿಂಗ, ಕಂಟೆಪ್ಪ, ವೆಂಕಟೇಶ ಪವಾರ್, ಬಸವರಾಜ, ಅನಿಲ್ ಹಾಸಗೊಂಡ, ಶಿವು, ರವಿ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ಬೆಂಗಳೂರಿನ ಮಹಾಶೈವ ಪ್ರಕಾಶನವು ಕೃತಿ ಪ್ರಕಟಿಸಿದೆ.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.