Date: 24-01-2021
Location: ಬಳ್ಳಾರಿ
ಸತ್ಯದ ಪ್ರತೀಕವಾಗಿರುವ ಬರಹವನ್ನು ಯಾರ್ಯಾರಿಗೋ ಮೆಚ್ಚಿಸಲೆಂದು ಬಳಸುವದು ಸಲ್ಲ ಎಂದು ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು/
ಬಳ್ಳಾರಿಯ ಕೌಲ್ ಬಜಾರ್ ವ್ಯಾಪ್ತಿಯ ರೇಯ್ಸ್ ಟವರ್ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ವಿಚಾರವಾದಿ, ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ ಅನುಭವ ಕಥನ ಹಾಗೂ ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ‘ದಣಿವರಿಯದ ಪಯಣ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬರಹಕ್ಕೆ ತನ್ನದೇ ಆದ ಪಾವಿತ್ಯ್ರತೆ ಇದೆ. ಸದುದ್ದೇಶವಿದೆ. ಅದನ್ನು ಲೇಖಕರು ಇನ್ಯಾರಿಗೋ ಮೆಚ್ಚಿಸಲು ಬರಹವನ್ನು ಬಳಸಬಾರದು. ಇದು ಬರಹದ ಗೌರವವನ್ನೇ ಪ್ರಶ್ನಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರರು ಬರೆದಂತೆ ಬರೆಯಬೇಕು. ಮಾರ್ಕ್ಸ್ ನ ದಾಸ್ ಕ್ಯಾಪಿಟಲ್ ಬರೆದಂತೆ ಬರೆಯಬೇಕು. ಇಂತಹ ಲೇಖಕರ ವಿಚಾರಗಳು ಕಾಲದುದ್ದಕ್ಕೂ ಸತ್ಯವನ್ನೇ ಪ್ರತಿಪಾದಿಸುತ್ತವೆ. ತಮ್ಮತನವನ್ನು ಕಾಪಾಡಿಕೊಳ್ಳುವ ಮೂಲಕ ಬರಹದ ಗಂಭೀರತೆಯನ್ನು ಹೆಚ್ಚಿಸುತ್ತವೆ. ಲೇಖಕರು ವಾಸ್ತವತೆಯನ್ನೇ ಸಾಮಾಜಿಕ ಹೊಣೆಗಾರಿಕೆಯ ಎಚ್ಚರದಿಂದ ಬರೆಯಬೇಕು ಎಂದು ಸಲಹೆ ನೀಡಿದರು.
ಆತ್ಮಕಥನ ಬರೆಯಲು ಗಟ್ಟಿಯಾದ ಮನೋಬಲ ಬೇಕು. ಲೇಖಕರೊಬ್ಬರ ನೈತಿಕ ಗಟ್ಟಿತನವು ಅಲ್ಲಿ ಪ್ರತಿಬಿಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ವೆಂಕಟಯ್ಯ ಅಪ್ಪಗೆರೆ ಅವರು ಬರೆದ ‘ದಣಿವರಿಯದ ಪಯಣ’ ಕೃತಿಯು ಉತ್ತಮ ಆತ್ಮಕಥೆಯ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದು ಪ್ರಶಂಸಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಧ್ಯಕ್ಷ ಶ್ರೀನಾಥ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೆ. ನರಸಿಂಹಮೂರ್ತಿ ಕೃತಿಯನ್ನು ಪರಿಚಯಿಸಿದರು. ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ, ರೇಯ್ಸ್ ಆಸ್ಪತ್ರೆ ಆಡಳಿತಾಧಿಕಾರಿ ಟಿ.ಆರ್. ಕೃಷ್ಣಮೂರ್ತಿ, ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.