ಯುವ ಬರಹಗಾರ ಸುಪ್ರೀತ್‌ ಕೆ.ಎನ್‌. ಅವರ 'ಸಾವು' ಕಾದಂಬರಿ ಬಿಡುಗಡೆ

Date: 06-06-2020

Location: ಫೇಸ್‌ಬುಕ್‌ ಲೈವ್


ಯುವ ಬರಹಗಾರ ಸುಪ್ರೀತ್‌ ಕೆ.ಎನ್‌. ಅವರು ರಚಿಸಿರುವ 'ಸಾವು' ಕಾದಂಬರಿಯನ್ನು ಖ್ಯಾತ ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಅವರು ಫೇಸ್ ಬುಕ್‌ ಲೈವ್‌ ಕೃತಿ ಬಿಡುಗಡೆ ಮಾಡಿದರು. 

ನಂತರ ಅವರು ಮಾತನಾಡಿ,“ಸುಪ್ರೀತ್‌ ತಮ್ಮ ಕಿರು ವಯಸ್ಸಿನಲ್ಲೇ 'ಸಾವು' ಎಂಬ ಗಂಭೀರ ವಿಷಯ ವಸ್ತುವನ್ನು ಕೇಂದ್ರವಾಗಿಸಿಕೊಂಡು, ಎರಡು ವ್ಯಕ್ತಿಗಳ ಸಾವಿನ ಜಿಜ್ಞಾಸೆಯ ವೈರುಧ್ಯವನ್ನು ತೆರೆದಿಡುವಂತಹ ಉತ್ತಮ ಕಾದಂಬರಿ ರಚಿಸಿರುವುದು ಅವರ ಪ್ರಬುದ್ಧತೆಗೆ ಸಾಕ್ಷಿ. ಇದೊಂದು ಪ್ರಯೋಗವೇ ಸರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಾಕ್‌ಡೌನ್‌ ಹಿನ್ನೆಲೆಯ ಕಾರಣ ಹೀಗೆ ಫೇಸ್ ಬುಕ್‌ ಲೈವ್‌ನಲ್ಲಿ ಕೃತಿ ಬಿಡುಗಡೆ ಮಾಡಲಾಗಿದೆ ಎಂದು ಸಮನ್ವಿತ ಪ್ರಕಾಶಕ ರಾಧಾಕೃಷ್ಣ ಅವರು ತಿಳಿಸಿದರು. ಶ್ರೀವತ್ಸ ಎಂ. ಸುಬೋಧ, ಕೃತಿಯ ಕರ್ತೃ ಸುಪ್ರೀತ್‌ ಕೆ. ಎನ್. ಉಪಸ್ಥಿತರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...