Poem

ಅಂತರ

ಶಬ್ದವಿಲ್ಲದ ವೇದನೆಗಳು ನಿಶ್ಯಬ್ದ ವಾಗಿದೆ ಇಂದು.
ಮನಸ್ಸು ಕರಗುವ ಕರುಣೆಗಳು ಕಾಣೆಯಾಗಿದೆ ಇಂದು.

ಹರಸುವ ದೇವನ ಮರೆಯಾಗಿದೆ
ಕೈಗಳು ಇಂದು.
ಅವನತಿಯ ಅಂಚಿನಲ್ಲಿ ಇಂಚು ಇಂಚು ಸಾಗಿದೆ ಇಂದು.

ಅಂತರಾತ್ಮದ ಆತ್ಮ ಸಾಕ್ಷಿ ಯು
ಅಮರವಾಗಲಿಲ್ಲ ಇಂದು.
ಮುಂಬರುವ ಬದುಕಿನಲ್ಲಿ ಭವ ದ ಸಾಧನೆಗಳು ಇಲ್ಲ ಇಂದು.


ಹೃದಯ ಹಿಂಡುವ ಮೂಕಪ್ರಾಣಿಯ ಬದುಕಾಗಿದೆ ಇಂದು.
ಭಾವನೆಗಳಿಗೆ ಬೆಲೆ ಇಲ್ಲದೆ ಬದುಕು ಸವಿದಿದೆ ಇಂದು.


ಮೂಕ ಜನರ ರುದ್ರ ರೋಧನ ಮರುಕಳಿಸುತ್ತಿದೆ ಇಂದು.
ಹರಸುವ ಮನಸುಗಳು ಹರಸಲಾಗದೆ
ಮೈ ಮುರಿದಿವೆ ಇಂದು.

ಅರ್ಥವಾಗದ ವ್ಯರ್ಥ ಜೀವನವು ಬೆಳಕು ಕಾಣುವುದೆಂದು.


ಶಬ್ದವಿಲ್ಲದ ವೇದನೆಗಳು ನಿಶ್ಯಬ್ದ ವಾಗಿದೆ ಇಂದು.
 

By: ದಿವಾಕರ್ ಶೆಟ್ಟಿ ಅಡ್ಯಾರ್

Comments[0] Likes[2] Shares[0]

Submit Your Comment

Latest Comments

No comments are available!