Poem

ಗುರು ರಾಮಕೃಷ್ಣ, ಯಾರಿದು?

 ೧.       ಗುರು ರಾಮಕೃಷ್ಣ
ಹುಲ್ಲು ಜೋಪಡಿಯಾಗ ಫಾಲ್ಗುಣ
ಮಾಸದಂದು ಜಗತ್ತನ್ನು ಜಾಗೃತಿಗೊ
ಳಿಸುವ ಜ್ಯೋತಿಯೊಂದು ಧರೆಯಲ್ಲಿ 
ಜನಿಸಿತು ಗುರು ಶ್ರೀ ರಾಮಕೃಷ್ಣನಾಗಿ, 
                     ಶಿಶುವಿನಲ್ಲಿಯೇ ಹಡೆದವಳನ್ನೆ
                      ಬೆಬ್ಬಳ ವಿಸ್ಮಯದಿಂದ ತಲ್ಲಣಿ
                     ಸುವಂತೆ ಮಾಡಿ,ಬಾಲ್ಯದಲ್ಲಿಯೇ
                     ಪ್ರತಿಭೆಯಿಂದ ಜನಮನ ಗೆದ್ದನು. 
ಜೀವನವೇ ನಶ್ವರವೆಂದ ಹಿರಿಯರ
ಮಾತು ಕೇಳಿ ನಿರ್ಜನ ಸ್ಥಳಕ್ಕೆ ತೆರಳಿ 
ಧ್ಯನಶೀಲನಾದನು,ಜ್ಞಾನದಸಿವಿಂದ
ಸಾಧು ಸನ್ಯಾಸಿಗಳ ಸಂಗ ಸೇರಿದನು.
                       ಹೊಟ್ಟೆ ಹೊರೆಯುವ ವಿದ್ಯೆಯನ್ನು
                       ತ್ಯಜಿಸಿ,ಜೀವನವಿದ್ಯೆ ಕಲಿತು ಜನರಿಗೆ
                       ಮಾರ್ಗದರ್ಶಕನಾಗಿ ಸರ್ವಧರ್ಮದ
                       ದೇವರೊಬ್ಬನೇ ಎಂದು ಸಾರಿದನು. 
ತನ್ನ ಪ್ರಶ್ನಿಸಿದ ಶಿಷ್ಯಸಂಕುಲವ
ಪ್ರೀತಿಸಿ ಉತ್ತರವನ್ನು ನೀಡುತ್ತಾ
ರವಿಕಿರಣಗಳತೆ ಜಗಕ್ಕೆಲ್ಲಾ ಚೆಲ್ಲಿ
ಸಮನ್ವಯ ಧರ್ಮದ ಬೆಳಕಾದನು. 
                                           - ನಂದನ. 
  ೨.           ಯಾರಿದು?
ಎದೆಯೊಳಗೆ ತಾಂಡವ ಆಡಬೇಡ
ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು
ಬೆನ್ನತ್ತ ಬೇಡ ಎಲ್ಲರಂತಿರಲು ಬಿಡು
ನೀ ಯಾರೆಂದು ಒಮ್ಮೆ ಹೇಳಿಬಿಡು.
                 ನೀ ಮನಹೊಕ್ಕಿದಾಗ ಶರಣಾದ
                 ಮನವು ಮಗುವಂತೆ ಆಯಿತೇಕೆ?
                 ಒಟ್ಟೊಟ್ಟಿಗೆ ಖುಷಿ ದುಃಖವೇಕೊ? 
                 ಮನಕ್ಕೆ ಹೊಸ ಸಂಚಲನವೇಕೊ? 
ಮನದೊಳಗೆ ಯಾಕಿಷ್ಟು ಪದಗಳ
ಸುಗ್ಗಿ,ನಾನೊಬ್ಬ ಸೋಮಾರಿಗಳ
ಸೋಮಾರಿ,ನನ್ನಯ ಮನದಂಗಳ
ಅರಿದಗೋಣಿ,ನಿನಗೇನು ಕೆಲಸವಲ್ಲಿ.
                     ಜ್ಞಾನಸಾಗರದಲ್ಲಿ ಈಜುವ ಬಯಕೆ
                     ಇಲ್ಲದವ ನಾನು,ನನ್ನಂತವನ ಬಳಿ
                     ನಿನ್ನಯ ರುದ್ರನರ್ತನವೇಕೊ ಕಾಣೆ, 
                     ಹೋಗು ಜ್ಞಾನ ಕರಗತವಾದವರ ಬಳಿ. 
ನೀನು ಕೊಡುವ ಬಾಧೆಯ
ನಾ ತಾಳಲಾರೇ,ಬಾಗಿಲೆಲ್ಲಾ
ಮುಚ್ಚಿದ್ದರು ಒಳನುಸುಳುವೇ
ಹೇಗೆಂಬ ಅರಿವು ನನಗಿಲ್ಲವಲ್ಲ. 
                                                        - ನಂದನ
                   
    ೩.              ಗುರು ದರ್ಶನ
ಗುರು ಗುರು ಗುರು ಎಂದುಡಿಕಿದವನ
ಮನಗಣ್ತೆರೆಯಲು ಗುರು ಸಿಕ್ಕಿಹನು.
                ನಿನಗೆ ಅರಿವಿನ ದಾರಿ ತೋರಿದವರೆಲ್ಲಾ
                ಗುರುಗಳು ಮರುಳ ಎನ್ನುತ್ತಾ ಬಂದಿಹನು
                ಶೂನ್ಯದಲ್ಲಿರುವೇ ನೀನಿನ್ನು ಎಂದಿಹನು
                ದಿಟ್ಟಿಸಿ ನೋಡುತ್ತಾ ನಸುನಗು ಚೆಲ್ಲಿದನು
ಮಾತಿನ ಜಡಿ ಏಟು ನೀಡಿದನು
ಆ ಏಟಿಗೆ ಮನವು ನರಳಾಡಿತು, 
ನೊಂದು ಕಣ್ಣಿಗೆ ಕೋಡಿ ಬಿದ್ದಿತ್ತು 
ಗುರುವಿಗೆ ತಲೆಬಾಗಿ ಹರ್ಷದಿಂದ. 
                ಎತ್ತು ನಿನ್ನ ಖಾಲಿ ಜೋಳಿಗೆಯ 
                ನಿಲ್ಲದಿರು ಜ್ಞಾನದ ಸಿರಿಸಂಪತ್ತು
                ತುಂಬಿ ತುಳುಕುವ ತನಕ ಅಲೆದ
                ಲೆದು ಬೇಡು ಜ್ಞಾನಭೀಕ್ಷೆಯೆಂದನು
ನಿನ್ನನ್ನು ನೀ ಅರಿಯುವ ತನಕ
ದೊರಕದು ಆ ಭೀಕ್ಷೆಯೆಂದನು
ಅಂದಕಾರದ ಬವಣೆಗೆ ಮುಕ್ತಿ
ನೀಡಲು ಬಂದ ಗುರು ಇವನು.                                                   
                                                   - ನಂದನ    
 
  ೪.                 ನನ್ನಾಕೆ 
ಲವಲೇಶ ಕಪಟವಿಲ್ಲದ ಮನದವಳು
ನನ್ನ ಮನದನ್ನೆ ಮುಗ್ಧಮನದವಳು      
                      ಪ್ರೀತಿ ವಿಶ್ವಾಸಕ್ಕೆ ಹೆಸರುವಾಸಿ
                      ಸ್ನೇಹಕ್ಕೆ ಕರ ಚಾಚಿದ ಅರಸಿ
                      ಮೊಗದಲ್ಲಿ ಸದಾ ನಗುವಿರಿಸಿ
                      ಎಲ್ಲರೊಂದಾಗಿರುವಳು ಹರಸಿ
ಮನದಾಸೆಗಳು ನೂರಿದ್ದರು
ಸೊಪ್ಪಾಕದೆ ಸರಿದಳು ದೂರ
ಕಟ್ಟಿದಳು ಕನಸ್ಸಿನ ಗೋಪುರ
ಮನದೊಳಗೆ ಚಿರ ಅಮರ
                        ಕನಸ್ಸು ಮನಸ್ಸಲ್ಲಿ ಕೆಡುಕನ್ನು
                        ಬಯಸದೆ ತನ್ನ ಶತ್ರುಗಳನ್ನು 
                        ಮಿತ್ರರಂತೆ ಕಂಡು ಒಳಿತನ್ನು
                        ಬಯಸುವಳು ನನ್ನ ಮನದನ್ನೆ
ನಿಸ್ವಾರ್ಥದಿಂದ ಇರುವವಳು
ಮಗುವಂತ ಗುಣವುಳ್ಳವಳು
ಮೌನದ ಮಾತಿನ ನಲ್ಲೆಯವಳು
ನನ್ನ ಬಾಳಿಗೆ ಹೊಳಪಾದವಳು
                                               -  ನಂದನ         

೫.                ಮರುಸೃಷ್ಟಿ
ಅಂದು ಕವಿತೆಯಾದವಳು ಇಂದು
ಕಥೆಯಾಗುವ ಆಸೆ ಹೊತ್ತಿರುವಳು.
ನವ ಜೀವನಕ್ಕೆ ನಾಂದಿಯಾದವಳು
ನನ್ನೆದೆಯ ರಾಜ್ಯವನ್ನು ಆಳುವವಳು
                     ಮನವನ್ನು ಕಾಡಿಸಿ ತೀಡಿಸುವಳು
                     ಲೇಖಿಸಲಾರೆ ಎಂದರು ಬಿಡಲಾರಳು
                     ಯಾವ ಜನ್ಮದ ಅನುಬಂಧದವಳೊ
                     ಮನಕ್ಕೆ ಬೆಸುಗೆಯಾಗಿ ಬೆರೆತಿರುವಳು
ನೊಂದಾಗಲೆಲ್ಲಾ ಸಾಂತ್ವನ ಹೇಳಿದಳು
ಮನವನ್ನು ಜಿಗಿಯುವಂತೆ ಮಾಡಿಹಳು
ಸೋರಗಿದ ಸ್ವಪ್ನಕ್ಕೆ ನೀರೆರೆದು ನಕ್ಕಳು
ಮನದ ಅನಂತ ಚಿಲುಮೆಯಾದವಳು
                     ಪದಗಳ ಜೊತೆ ಸೆಣಸಾಟ ಇಟ್ಟಳು
                     ಅದರಲ್ಲಿ ಆಹ್ಲಾದಕರ ಕೊಟ್ಟವಳು
                     ಒಲವಿನ ಸವಿಯ ಉಣ್ಣಿಸಿದವಳು
                     ನನ್ನಲ್ಲಿ ಅಚಲಶಕ್ತಿಯಾಗಿ ನೆಲೆಸಿದಳು                                                      

By: ಯೋಗಾನಂದ ಎನ್ ಬಿ

Comments[0] Likes[2] Shares[0]

Submit Your Comment

Latest Comments

No comments are available!